ಕಾರ್ಕಳ: ಕಾರ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ಅದರ ದಾಖಲೆಗಳನನ್ದು ಕ್ರೋಡಿಕರಿಸಿ ಪ್ರಧಾನಿ ನರೇಂದ್ರ ಮೋದಿ ಯವರಿಗೆ ದೂರು ನೀಡುವುದಾಗಿ ಶ್ರೀ ರಾಮಸೇವಾ ಸವೋಚ್ಛ ನಾಯಕ ಪ್ರಮೋದ್ ಮುತಾಲಿಕ್ ಹೇಳಿದರು.
ಕುಕ್ಕುಂದೂರು ಪರಪ್ಪುವಿನ ಪಾಂಚ್ಯಜನ್ಯ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೀಗಾಗಲೇ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ಬಯಲಿಗೆಳೆದು ಅಗತ್ಯ ದಾಖಲೆ ಪತ್ರಗಳೊಂದಿಗೆ ಲೋಕಾಯುಕ್ತ ದೂರು ನೀಡಿರುವುದಾಗಿ ತಿಳಿಸಿದರು. ಈಗ ಮೂರನೇ ಹಂತಗದಲ್ಲಿ ನಾಲ್ಕು ಭ್ರಷ್ಟಚಾರ ಪ್ರಕರಣಗಳ ಬಯಲು ಮಾಡಿ ದಾಖಲೆ ಸಮೇತಾ ಯೋಕಾಯುಕ್ತಕ್ಕೆ ದೂರು ನೀಡುವುದಾಗಿ ತಿಳಿಸಿದರು.
ಪೊಟ್ಟು ಕೆರೆ ಅಭಿವೃದ್ಧಿಯಿಂದ ಏನು ಸಾಧ್ಯ?
ಕಣಂಜಾರು ಗ್ರಾಮ ಪಡುಕಟ್ಟೆ ಎಂಬಲ್ಲಿ ಹಲವು ವರ್ಷಗಳಿಂದ ನಿರುಪಯುಕ್ತವಾಗಿದ್ದ (ಪೊಟ್ಟು ಕೆರೆ)ಯನ್ನು ಕುಡಿಯಲು ಹಾಗೂ ಇತರ ಉಪಯೋಗಕ್ಕಾಗಿ ೧೦ ಲಕ್ಷ ಮೌಲದಲ್ಲಿ ಅಭಿವೃದ್ಧಿ ಪಡಿಸಿರುವುದಾಗಿ ದಾಖಲೆಯಲ್ಲಿದೆ. ಅನುದಾನವು ಅದಕ್ಕೆ ವಿನಿಯೋಗವಾಗಿ ಆದರೆ ಅಲ್ಲಿ ೧೦ ಸಾವಿರ ರೂಪಾಯಿ ಕಾಮಗಾರಿ ನಡೆದಿಲ್ಲ. ಆದರೂ ಇನ್ನೂ ೧೫ ಲಕ್ಷ ಅಭಿವೃದ್ಧಿಗಾಗಿ ಬೇಡಿಕೆಯನ್ನು ಇಟ್ಟಿರುವುದು ಬಯಲಾಗಿದೆ. ಒಟ್ಟಾರೆ ಈ ಕಾಮಗಾರಿಗಾಘಿ ರೂ.೨೫ ಲಕ್ಷ ವಿನಿಯೋಗವಾದರೂ ಊರಿಗೆ ಅನುಕೂಲವಾಗುದಿಲ್ಲ. ಇದೊಂದು ವ್ಯವಸ್ಥಿತವಾದ ಭಷ್ಟಚಾರ ಹಾಘೂ ಹಣ ಲೂಟಿ ಯೋಜನೆಯ ಭಾಗವಾಗಿದೆ ಎಂದರು.
ಅದೇ ಊರಿನ ಪುರಾತನವಾದ ಜಡ್ಡಿನಕಟ್ಟೆ ಕೆರೆ ಇದ್ದು ಆ ಕೆರೆಯನ್ನು ಮುಚ್ಚಿ ಅಕ್ರಮ ಗಣಿಕಾರಿಕೆ ನಡೆಯುತ್ತಿತ್ತು. ತೀರ್ಥ ಹಳ್ಳಿಯ ಶರೀಫ್ ಎಂಬವರು ಅದನ್ನು ನಡೆಸುತ್ತಿದ್ದರು. ಅದನ್ನು ಮನಗಡು ನಮ್ಮ ಸಂಘಟನೆಯ ಪ್ರಮುಖರಾದ ದಿವ್ಯ ಹಾಗೂ ಇತರರ ಮುಖಂತರ ಹೋರಾಟ ನಡೆಸಿ ಫಲವಾಗಿ ಈಗ ಅಕ್ರಮಗಣಿಗಾರಿಕೆ ನಿಲುಗಡೆಯಾಗಿದೆ ಎಂಬುದರ ಕುರಿತು ಮಾಹಿತಿ ನೀಡಿದರು.
ಸ್ಥಾಪಿತ ಹಿತಾಸಕ್ತಿಯ ಕುಮ್ಮುಕ್ಕಿನಿಂದ ಆ ಗಣಿಗಾರಿಕೆ ಆರಂಭಕ್ಕೆ ತಯಾರಿ ನಡೆಯುತ್ತಿದೆ. ಮುಂದೆ ಉಂಟಾಗುವ ಎರಡು ತೊಡರಿಗೆ ಜಿಲ್ಲಾಡಳಿತವೇ ನೇರ ಹೊಣೆಗಾರಿಕೆಯಾಗಿದೆ ಎಂದರು.