ಕಾರ್ಕಳ: ನಗರ ವ್ಯಾಪ್ತಿಯ ಹವಾಲ್ದಾರ್ ಬೆಟ್ಟು-ಗಾಂಧಿ ಮೈದಾನ ಸಂಪರ್ಕ ರಸ್ತೆಯ ಕುರಿತು ಕಾರ್ಕಳ ಪುರಸಭೆಯ ಆಡಳಿತ ವರ್ಗ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.
ಸ್ಥಳೀಯ ನಾಗರಿಕರು ಕಳೆದ 6 ತಿಂಗಳಿಂದ ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹವಾಲ್ದಾರ್ ಬೆಟ್ಟು-ಗಾಂಧಿ ಮೈದಾನ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಸಲ್ಲಿಸಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯಾಡಳಿತವು ನಾಗರಿಕ ಕೋರಿಕೆಗಳಿಗೆ ಸ್ಪಂದಿಸಲೇ ಬೇಕಾಗಿದೆ. ಹೀಗಿದ್ದರೂ ಕಾರ್ಕಳ ಪುರಸಭಾ ಆಡಳಿತ ವರ್ಗವು ಇದ್ಯಾವುದಕ್ಕೂ ಕ್ಯಾರೇ ಮಾಡದಿರುವುದರಿಂದ ಪರಿಸರದಲ್ಲಿ ಹೊಸ ಹೊಸ ಸಮಸ್ಯೆ ಗಳು ಕಂಡುಬರುತ್ತಿದೆ.
ಹವಾಲ್ದಾರ್ ಬೆಟ್ಟು-ಗಾಂಧಿ ಮೈದಾನ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಿದರೆ ನಗರದ ಹೃದಯಭಾಗಕ್ಕೆ ತಲುಪಲು ಸನ್ನಿಹವಾಗುತ್ತದೆ.
ಅಭಿವೃದ್ಧಿಯಲ್ಲಿ ಮರೀಚಿಕೆ ಕಂಡು ಬಂದಿರುವ ಹವಾಲ್ದಾರ್ ಬೆಟ್ಟು-ಗಾಂಧಿ ಮೈದಾನ ಸಂಪರ್ಕ ರಸ್ತೆಯಿಂದಾಗಿ ಪ್ರತಿದಿನ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಸಹಿತ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರು ಪುರಸಭೆಯ ಆಡಳಿತ ವರ್ಗಕ್ಕೆಹಿಡಿ ಶಾಪ ಹಾಕುವಂತಾಗಿದೆ.
ಇದೇ ರಸ್ತೆಯಲ್ಲಿ ನಡೆದಾಡುವ ಪಾದಚಾರಿಗಳಿಗೆ ಓಡಾಡುವ ವಾಹನಗಳಿಂದ “ಕೆಸರ” ಅಭಿಷೇಕವಾಗುತ್ತಿರುತ್ತದೆ.