ಉಡುಪಿ: ಜಗದೀಶ್ ಶೆಟ್ಟರ್ಗೆ ಪಕ್ಷ ಎಲ್ಲ ರೀತಿಯ ಅವಕಾಶಗಳನ್ನು ಕೊಟ್ಟಿದೆ. ಸ್ಪರ್ಧೆಗೆ ಅವಕಾಶ ಇಲ್ಲ ಎಂದಾದಾಗ ಪಕ್ಷಾಂತರ ಮಾಡುವುದು ಕಾರ್ಯಕರ್ತರ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷ ಅವರಿಗೆ ಯಾವುದೇ ಅವಕಾಶವನ್ನು ಬಾಕಿ ಇಟ್ಟಿಲ್ಲ. ಜಗದೀಶ್ ಶೆಟ್ಟರ್ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಿಂದ ಯಾವ ಲಾಭದ ನಿರೀಕ್ಷೆ ಇಟ್ಟು ಹೋಗಿದ್ದಾರೋ ಗೊತ್ತಿಲ್ಲ. ಅವರು ಮರುಚಿಂತನೆಯನ್ನು ಮಾಡುವ ಅಗತ್ಯ ಇತ್ತು ಎಂದರು.
ಕಾಂಗ್ರೆಸ್ನ ಆಂತರಿಕ ಬೇಗುದಿ ಆರಂಭವಾಗುತ್ತದೆ. ಮುಖ್ಯಮಂತ್ರಿ ಅಭ್ಯರ್ಥಿಯೆಂದು ಮಾಡಿಕೊಂಡವರಿಗೆ ಕ್ಷೇತ್ರ ಅಂತಿಮವಾಗಿಲ್ಲ, ಕಾಂಗ್ರೆಸ್ ನೊಳಗೆ ಆಂತರಿಕ ಬೇಗುದಿ ದೊಡ್ಡ ಪ್ರಮಾಣದಲ್ಲಿದೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ ಎಂದು ಟೀಕಿಸಿದರು