News Karnataka Kannada
Sunday, May 05 2024
ಉಡುಪಿ

ಕೃಷ್ಣ ಮಠಕ್ಕೆ ಜಾಗ ಕೊಟ್ಟಿರುವುದು ಹಿಂದು ಅರಸ : ಪೇಜಾವರ ಶ್ರೀ

It was the Hindu king who gave land to Krishna Mutt: Pejawar Sri
Photo Credit : By Author

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮತ್ತು ಶ್ರೀ ಅನಂತೇಶ್ವರ ದೇಗುಲಕ್ಕೆ ಅರಸ ರಾಮಭೋಜ ಎನ್ನುವವರು ಜಾಗ ನೀಡಿದ್ದಾರೆಯೇ ಹೊರತು ಬೇರೆ ಯಾರೂ ಅಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಶಾಸನಗಳು ಇವೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ.

ಆಧಾರ ರಹಿತವಾದ ಹೇಳಿಕೆ ನೀಡುವವರ ಮಾತಿನ ಬಗ್ಗೆ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಉಡುಪಿಯ ಕೃಷ್ಣ ಮಠ, ಅನಂತೇಶ್ವರ ಸನ್ನಿಧಿಗೆ ರಾಮಭೋಜ ಎಂಬ ಅರಸ ಹಾಗೂ ಕುಂಜಿತ್ತಾಯ ಮನೆತನದವರು ಜಮೀನು ನೀಡಿದ್ದಾರೆ ಎನ್ನುವುದಕ್ಕೆ ದಾಖಲೆಗಳು ಮತ್ತು ಶಿಲಾಶಾಸನಗಳು ಇವೆ ಎಂದಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್‌ ನಾಯಕ ಮಿಥುನ್‌ ರೈ ಕೃಷ್ಣ ಮಠಕ್ಕೆ ಜಾಗ ಕೊಟ್ಟವರು ಮುಸ್ಲಿಮರು ಎಂಬ ಆಧಾರ ರಹಿತವಾದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

ಇದಕ್ಕೆ ಸ್ಪಷ್ಟೀಕರಣ ಕೊಟ್ಟಿರುವ ಉಡುಪಿಯ ಶಾಸಕ ರಘುಪತಿ ಭಟ್‌ ಮುಸ್ಲಿಂ ಅರಸರು ಕೃಷ್ಣ ಮಠಕ್ಕೆ ಜಾಗ ಕೊಟ್ಟಿಲ್ಲ, ಮಧ್ವ ಸರೋವರದಲ್ಲಿರುವ ಶಾಸನದಲ್ಲಿ ಜಾಗ ಯಾರು ಕೊಟ್ಟಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದ ಶಾಸನಗಳಿವೆ. ಹಾಜಿ ಅಬ್ದುಲ್ಲ ಸಾಹೇಬರು ಶ್ರೀ ಕೃಷ್ಣನ ಭಕ್ತರಾಗಿದ್ದರು ಮತ್ತು ಈ ನೆಲೆಯಲ್ಲಿ ಮಠಕ್ಕೆ ಸಹಾಯ ಮಾಡಿರುವುದು ನಿಜ. ಆದರೆ ಕೆಲವರು ಸೌಹಾರ್ದತೆಯ ಹೆಸರಿನಲ್ಲಿ ಇತಿಹಾಸವನ್ನೇ ತಿರುಚುತ್ತಿದ್ದಾರೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು