ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಮಂಕಿ ಸ್ಪಂದನ ಯುವ ಸಂಘದ ಸದಸ್ಯರು 600 ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಆರೈಕೆ ಮಾಡುವುದರ ಮುಖೇನ ಪರಿಸರ ಸಂರಕ್ಷಣೆಗೆ ಕಾರ್ಯ ಮಾಡುತ್ತಿದ್ದಾರೆ ಯುವಕರ ಕೆಲಸ ಜನರಮೆಚ್ಚುಗೆಗೆ ಪಾತ್ರವಾಗಿದೆ.
ಗುಜ್ಜಾಡಿ ಗ್ರಾಮದ ಮಂಕಿ ಪರಿಸರದ ಸಮಾನ ಮನಸ್ಕ ಯುವಕರು ಸೇರಿಕೊಂಡು ಕಳೆದ 10 ವರ್ಷಗಳ ಹಿಂದೆ ಸ್ಪಂದನ ಯುವ ಸಂಘ ಮಂಕಿ-ಗುಜ್ಜಾಡಿ ಎನ್ನುವ ಹೆಸರಿನೊಂದಿಗೆ ಸಂಘವನ್ನು ಕಟ್ಟಿಕೊಂಡಿದ್ದಾರೆ.ಕಳೆ ಹತ್ತು ವರ್ಷಗಳಿಂದ ಪರಿಸರದ ವಿದ್ಯಾರ್ಥಿಗಳಿಗೆ ವೇತನ ವಿತರಣೆ,ಪರಿಸರ ಸ್ವಚ್ಛತೆ,ಅಶಕ್ತರಿಗೆ ನೆರವು,ಪುಸ್ತಕ ವಿತರಣೆ ಜತಗೆ ಪರಿಸರ ಸಂರಕ್ಷಣೆಯನ್ನು ಕೂಡ ಮಾಡುತ್ತಿದ್ದಾರೆ.
ಹೊಸಾಡು ಕೆಸಿಡಿಸಿ ಮತ್ತು ಅರಣ್ಯ ಇಲಾಖೆಯ ಜತೆ ಸೇರಿ ಮಂಕಿ ಸ್ಪಂದನ ಯುವ ಸಂಘದ ಸದಸ್ಯರು ಮಳೆಗಾಲದಲ್ಲಿ ಹೊಸಾಡು ಗೇರು ತೋಟ ಮತ್ತು ಪೊಲೀಸ್ ಠಾಣೆಯ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಇಲಾಖಾ ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ.
ಧೂಪ, ಹೊನ್ನೆ, ಹೆಬ್ಬೆಲೆಸು, ಬಿದಿರು, ಮುರಿನ ಗಿಡ, ಛಾಪೆ ಗಿಡ, ಮಹಾಗನಿ, ಹೊಂಗೆ ಸೇರಿದಂತೆ ಇನ್ನಿತರ ಜಾತಿಯ 120 ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ ಬೇಸಿಗೆಯಲ್ಲಿ ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಪೋಷಣೆಯನ್ನು ಮಾಡುತ್ತಿದ್ದಾರೆ.
ಸ್ಪಂದನ ಯುವ ಸಂಘ ಮಂಕಿ-ಗುಜ್ಜಾಡಿ ವತಿಯಿಂದ 10 ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ.ಜತಗೆ ಪರಿಸರ ಸಂರಕ್ಷಣೆ ದೃಷ್ಟಿಯನ್ನು ಇಟ್ಟುಕೊಂಡು ಕಳೆದ 3 ವರ್ಷಗಳಿಂದ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಸ್ಪಂದನ ಯುವ ಸಂಘದ ಮಾಜಿ ಅಧ್ಯಕ್ಷ ರಘು.ಎಂ ಹೇಳುತ್ತಾರೆ.