ಉಡುಪಿ: ಶ್ರೀ ಕಾಶಿಮಠ ಸಂಸ್ಥಾನ ವೆಲ್ಫೇರ್ ಫಂಡ್ ಹಾಗೂ ಪೊಸಾರ್ ಹರಿಶೆಣೈ, ಸಕು ಬಾಯಿ ದತ್ತಿನಿಧಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನ.25ರಂದು ಬೆಳಿಗ್ಗೆ 9 ಗಂಟೆಗೆ ಕಟಪಾಡಿ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ದತ್ತಿನಿಧಿ ಪ್ರವರ್ತಕ ಡಾ. ಕೃಷ್ಣ ಶೆಣೈ ತಿಳಿಸಿದರು.
ತೆಂಕಪೇಟೆ ಲಕ್ಷ್ಮೀವೆಂಕಟೇಶ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ನಂದಗೋಪಾಲ್ ಶೆಣೈ, ತೆಂಕಪೇಟೆ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ, ಎಂ. ದಿನೇಶ್ ಕಿಣಿ, ಉದ್ಯಮಿ ಕೆ. ಸತ್ಯೇಂದ್ರ ಪೈ, ಲಕ್ಷ್ಮೀಕಾಂತ ಶೆಣೈ, ಕೊಚಿಕ್ಕಾರ್ ದಿವಾಕರ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲೀಲಾ ಕೃಷ್ಣ ಶೆಣೈ, ತೆಂಕಪೇಟೆ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ, ಪ್ರಮುಖರಾದ ಭಾಸ್ಕರ ಶೆಣೈ, ಕೋಟೇಶ್ವರ ಶ್ರೀನಿವಾಸ ಕಾಮತ್, ದಿನೇಶ್ ಶೆಣೈ, ದೀಪಕ್ ಶೆಣೈ ಉಪಸ್ಥಿತರಿದ್ದರು.