ಉಡುಪಿ: ಭದ್ರಾವತಿಯ ಬೆಂಕಿ ಬ್ಯಾಚ್ಮೆಟ್ಸ್ ಪ್ರೊಡಕ್ಷನ್ ನಡಿ ಲೇಖಕ ಸುಶಾಂತ್ ಅವರ ‘ದೀಪವಿರದ ದಾರಿಯಲ್ಲಿ’ ಕಾದಂಬರಿ ಆಧಾರಿತ ‘ದ್ವಮ್ದ್ವ’ ಕಲಾತ್ಮಕ ಕನ್ನಡ ಚಿತ್ರ ನಿರ್ಮಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಕ್ಲಿಂಗ್ ಜಾನ್ಸನ್ ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನದಲ್ಲಿ ಸ್ತ್ರೀಪಾತ್ರ ನಿರ್ವಹಿಸುವ ವ್ಯಕ್ತಿಯ ಜೀವನವನ್ನು ಆಧಾರಿಸಿ ಚಿತ್ರಕಥೆ ರಚಿಸಲಾಗಿದೆ. ಸಿನಿಮಾ ‘ಯುಎ’ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿದ್ದು, ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳಲಿದೆ. ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಉಡುಪಿಯಲ್ಲಿ ಮಾಡಲಾಗಿದೆ ಎಂದರು.
ಡಿ. 17ರಂದು ಮಣಿಪಾಲದ ಭಾರತ್ ಸಿನಿಮಾಸ್ನಲ್ಲಿ ಚಿತ್ರದ ಪ್ರಿಮಿಯರ್ ಶೋ ನಡೆಯಲಿದೆ. ಈ ಸಿನಿಮಾವನ್ನು ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಅವರಿಗೆ ಅರ್ಪಿಸಲಾಗಿದೆ ಎಂದು ತಿಳಿಸಿದರು. ಚಿತ್ರಕಥೆಯನ್ನು ಸಿತೇಶ್ ಸಿ.ಗೋವಿಂದ್, ಸಂಗೀತ ಗಿರಿಧರ್ ದಿವಾನ್, ಬಿಜಿಎಂ ಯತಿರಾಜ್ ಉಪ್ಪೂರು, ಡಿಒಪಿ ಸ್ವರೂಪ್ ಯಶವಂತ್, ಸಂಕಲವನ್ನು ಪ್ರಜ್ವಲ್ ಸುವರ್ಣ ಮಾಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಸಿತೇಶ್ ಸಿ.ಗೋವಿಂದ್, ಬೆನ್ನು ಪೀಟರ್ ಇದ್ದರು.