ಕುಂದಾಪುರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರಾವಳಿ ಪ್ರವಾಸದಲ್ಲಿರುವ ಕೆಪಿಸಿಸಿ ರಾಜಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ದಂಪತಿ ಸಮೇತರಾಗಿ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಶ್ರೀ ಮೂಕಾಂಬಿಕಾ ದೇವರಿಗೆ ನವ ಚಂಡಿಕಾ ಹೋಮವನ್ನು ಸಮರ್ಪಿಸಿದರು.
ಭಾನುವಾರ ಬೈಂದೂರು ಕ್ಷೇತ್ರಕ್ಕೆ ಆಗಮಿಸಿದ ಅವರು ಬೈಂದೂರುನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ನಂತರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ರಾತ್ರಿ ವಸತಿ ಗ್ರಹದಲ್ಲಿ ತಂಗಿದ್ದರು.
ಸೋಮವಾರ ದಂಪತಿ ಜೊತೆ ಗೂಡಿ ಶ್ರೀ ಮೂಕಾಂಬಿಕಾ ದೇವಿಗೆ ನವ ಚಂಡಿಕಾ ಹೋಮವನ್ನು ಸಮರ್ಪಣೆ ಮಾಡಿ ದೇವರ ಆರ್ಶೀವಾದ ಪಡೆದುಕೊಂಡರು.ಈ ಸಂದರ್ಭದಲ್ಲಿ ಉದ್ಯಮಿ ಯು.ಬಿ ಶೆಟ್ಟಿ ಅವರು ಜೊತೆಯಲ್ಲಿದ್ದು ಸಹಕರಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಪಣ ತೊಟ್ಟಿರುವ ಡಿ.ಕೆ.ಶಿ ಅವರು ಪ್ರಚಾರದ ಕಾರ್ಯದ ನಡುವೆ ಟೆಂಪಲ್ ರನ್ನ್ನಲ್ಲಿ ತೊಡಗೊಂಡಿದ್ದಾರೆ.