ಬೈಂದೂರು: ಕರಾವಳಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಹೀಗಾಗಿ ಬೈಂದೂರಿನ ತಗ್ಗುಪ್ರದೇಶಗಳಾದ ನಾವುಂದ, ಬಡಾಕೇರಿ, ಸಾಲ್ಬುಡ, ಮರವಂತೆ, ಪಡುಕೋಣೆ ಮತ್ತು. ನೀರೋಡಿ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಭೇಟಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸೌಪರ್ಣಿಕಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ನದಿಯ ಅಕ್ಕಪಕ್ಕ ಇರುವ ಮನೆಗಳನ್ನು ತೆರವುಗೊಳಿಸಲು ಎಚ್ಚರಿಕೆ ನೀಡಿದ್ದು ಅಗತ್ಯವಿದ್ದಲ್ಲಿ ಗಂಜಿ ಕೇಂದ್ರ ತೆರೆಯಲು ಸೂಚನೆ ನೀಡಲಾಯಿತು. ಜಾನುವಾರುಗಳಿಗೆ ಕೊಟ್ಟಿಗೆ ನಿರ್ಮಾಣ ಮಾಡಲು ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಿದರು. ಬೈಂದೂರು ತಸಿಲ್ದಾರ್ ಶ್ರೀಕಾಂತ್ ಹೆಗಡೆ, ಆರು ಮಂಜು, ಗ್ರಾಮ ಕರಣಿಕರು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.