ಬೈಂದೂರು: ಮೂರು ಶತಕೋಟಿ ಗಿಂತಲೂ ಹೆಚ್ಚಿನ ಜನರು ಜೀವನೋಪಾಯಕ್ಕಾಗಿ ಸಾಗರವನ್ನು ಅವಲಂಬಿಸಿದ್ದಾರೆ ನಾವು ಉಸಿರಾಡುವ ಆಮ್ಲಜನಕವು ಶೇ.60 ಹೆಚ್ಚಿನ ಪ್ರಮಾಣವನ್ನು ಸಾಗರದಿಂದ ಪಡೆಯುತ್ತಿದ್ದೇವೆ ಸಮುದ್ರದ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ದಕ್ಷಿಣ ಭಾರತ ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರಕಾರ ರಿಜಿನಲ್ ಡೈರೆಕ್ಟರ್ ಮೊಹ್ಮದ್ ಫಾರೂಕ್ ಹೇಳಿದರು.
ಪ್ರವಾಸೋದ್ಯಮ ಸಚಿವಾಲಯ ಭಾರತ ಸರಕಾರ ಮತ್ತು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ ಕುಂದಾಪುರ ತಾಲೂಕಿನ ತ್ರಾಸಿ ಬೀಚ್ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬೀಚ್ನ ಸ್ವಚ್ಛತೆಯನ್ನು ಕಾಪಾಡಲು ಕಸದ ತೊಟ್ಟಿ ಮತ್ತು ಜನಾಗೃತಿಯ ಸಂದೇಶವುಳ್ಳ ಬೋರ್ಡ್ಅನ್ನು ತ್ರಾಸಿ ಗ್ರಾಮ ಪಂಚಾಯತ್ಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ತ್ಯಾಜ್ಯವನ್ನು ಸಾಗರ ಮತ್ತು ನದಿಗಳಿಗೆ ಎಸೆಯುವುದು ಅಪರಾಧವಾಗಿದೆ ನಮ್ಮ ಉಳಿವಿಗೆ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ ಕಸವನ್ನು ಕಸದ ಡಬ್ಬಿಗಳಿಗೆ ಹಾಕುವುದರ ಮುಖೇನ ಪರಿಸರದ ಉಳುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ತ್ರಾಸಿ ಗ್ರಾಪಂ ಅಧ್ಯಕ್ಷೆ ಗೀತಾ ದೇವಾಡಿಗ, ಸದಸ್ಯರಾದ ರೆನ್ಸಮ್ ಪಿರೇರಾ, ಮಿಥುನ್ ದೇವಾಡಿಗ, ರಾಜು ಮೆಂಡನ್ ಮತ್ತು ಪಿಡಿಒ ಶೋಭಾ.ಎಸ್ ಹಾಗೂ ಮರವಂತೆ ಗ್ರಾ.ಪಂ ಸದಸ್ಯ ನಾಗರಾಜ ಪಠಗಾರ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ನ ಸದಸ್ಯರಾದ ಭರತ್ ಬಂಗೇರ, ಅನುದೀಪ್ ಹೆಗ್ಡೆ ಮತ್ತು ವಿನುಸ, ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ಐ ವಿನಯ್, ಸಿಬ್ಬಂದಿ ದಿನೇಶ್, ಕರಾವಳಿ ಪೊಲೀಸ್ ಠಾಣಾ ಸಿಬ್ಬಂದಿಗಳು, ಮರವಂತೆ ಮತ್ತು ತ್ರಾಸಿ ಕ್ಲೀನ್ ಪ್ರಾಜೆಕ್ಟ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.