ಕುಂದಾಪುರ: ಬಸ್ಸಿನಡಿಗೆ ಬಿದ್ದ ಸೈಕಲ್ ಸವಾರ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ, ಪವಾಡ ಸದೃಶವಾಗಿ ಪಾರಾದ ಘಟನೆ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶಾಸ್ತ್ರಿ ಸರ್ಕಲ್ ಬಳಿ ಸೈಕಲ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಬೈಂದೂರು ಕಡೆಗೆ ಏಕಾಏಕಿ ತಿಗುರುತ್ತಿದ್ದ ಖಾಸಗಿ ಬಸ್ನಡಿಗೆ ಬಿದ್ದಿದ್ದಾರೆ. ಈ ವೇಳೆ ಬಸ್ಸನ್ನು ಚಾಲಕ ನಿಲ್ಲಿಸಿದ್ದರಿಂದ ಯಾವುದೇ ಅನಾಹುತ ಆಗಿಲ್ಲ. ಇಲ್ಲದಿದ್ದರೆ ಸೈಕಲ್ ಸವಾರರಿಗೆ ಏನಾದರೂ ಅನಾಹುತ ಆಗುವ ಸಂಭವವೂ ಇತ್ತು.
ಬಸ್ ಗಳು ಸಮಯ ಪಾಲನೆ ಧಾವಂತದಲ್ಲಿ ವೇಗವಾಗಿ ಸಂಚರಿಸುತ್ತಾ, ರಸ್ತೆಯಲ್ಲಿ ಸಂಚರಿಸುವ ಇತರರ ಬಗ್ಗೆ ಎಚ್ಚರವೇ ವಹಿಸುತ್ತಿಲ್ಲ ಎನ್ನುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.