ಬೈಂದೂರು: ಕ್ಷೇತ್ರದ ವಿದ್ಯಾವಂತ ಮತದಾರರು ಜಾತಿ, ಧರ್ಮ, ಮೀರಿ ಮತ ಚಲಾಯಿಸುವುದರ ಲಾಭ ನಮ್ಮ ಪಕ್ಷಕ್ಕೆ ದೊರಕಲಿದೆ. ಈ ಬಾರಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಅಚ್ಚರಿಯ ಫಲಿತಾಂಶ ನೀಡಲಿದೆ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಿ.ಎ ರಮಾನಂದ ಪ್ರಭು ಹೇಳಿದರು.
ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಮತಯಾಚಿಸಿ ಮಾತನಾಡಿದ ಅವರು ಜಾತಿ, ಹಣ ಮೀರಿದ ರಾಜಕಾರಣದಲ್ಲಿ ಆಮ್ ಆದ್ಮಿ ತೊಡಗಿದೆ. ಭ್ರಷ್ಟಚಾರದ ಕಪಿ ಮುಷ್ಟಿಯಲ್ಲಿ ಸಿಲುಕಿರುವ ಈ ಬೈಂದೂರು ಕ್ಷೇತ್ರವನ್ನು ಈ ಬಾರಿ ಮತದಾರರು ಬಿಡಿಸಲಿದ್ದಾರೆ. ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಿ,ಎ ಪ್ರಭುರವರು ಬೈಂದೂರು ಕ್ಷೇತ್ರದ ಶಿರೂರು, ಕೊಲ್ಲೂರು, ಹೊಸಂಗಡಿ, ಸಿದ್ದಾಪುರ, ಆಜ್ರಿ, ಮೂದೂರು, ಗಂಗೊಳ್ಲಿ, ಮರವಂತೆ, ನಾವುಂದ, ಉಪ್ಪುಂದ, ಹಳ್ಳಿಹೊಳೆ, ಕೊಡೇರಿ, ಮುಂತಾದ ಸ್ಥಳಗಳಲ್ಲಿ ಮತಯಾಚನೆ ಮಾಡಿದರು.