News Karnataka Kannada
Sunday, April 28 2024
ಉಡುಪಿ

ಕುಂದಾಪುರ: ಶ್ರೀಕ್ಷೇತ್ರ ಗುಹೇಶ್ವರ ಸಂಪರ್ಕ ರಸ್ತೆ ಅಭಿವೃದ್ಧಿಗೆ ಆಗ್ರಹ

Kundapur: Demand for development of Srikshetra Guheswara link road
Photo Credit : News Kannada

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀ ಗುಹೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶ್ರೀಗುಹೇಶ್ವರ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿ 66 ರಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ಸುಮಾರು 300.ಮೀ ನಷ್ಟು ಉದ್ದವಿರುವ ರಸ್ತೆ ಅಭಿವೃದ್ಧಿ ಕಾಣದೆ 50 ಕ್ಕೂ ಅಕ ವರ್ಷಗಳೆ ಕಳೆದು ಹೋಗಿದೆ.ಹೊಂಡ ಗುಂಡಿ,ಮುಳ್ಳಿನ ಪೋದೆಗಳಿಂದ ಆವೃತ್ತವಾದ ಶ್ರೀಗುಹೇಶ್ವರ ದೇವಳದ ರಸ್ತೆಯನ್ನು ಗ್ರಾಮಸ್ಥರು ಮತ್ತು ದೇವಳದ ಸಮಿತಿಯವರು ಶ್ರಮದಾನದ ಮೂಲಕ ಸ್ವಚ್ಛತೆಯನ್ನು ಮಾಡಿದ್ದಾರೆ.

ರಸ್ತೆ ಅಭಿವೃದ್ಧಿಗೆ ಆಗ್ರಹ:

1200 ವರ್ಷಗಳಷ್ಟೂ ಇತಿಹಾಸವನ್ನು ಹೊಂದಿರುವ ಶ್ರೀಗುಹೇಶ್ವರ ದೇವಸ್ಥಾನಕ್ಕೆ ಸಂಪರ್ಕವನ್ನು ಕಲ್ಪಿಸುವ ರಸ್ತೆ ಕೆಂಪು ಮಣ್ಣಿನಿಂದ ಕೂಡಿದೆ,ಧೂಳು ಮಯವಾದ ರಸ್ತೆಯಲ್ಲಿ ಸಾಗುವುದೇ ಭಕ್ತಾಗಳಿಗೆ ದುಸ್ತರವಾಗಿದ್ದು ರಸ್ತೆಯನ್ನು ಅಭಿವೃದ್ಧಿಗೊಳಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗುಹೇಶ್ವರ ದೇವಾಲಯಕ್ಕೆ ಸನಿಹವಿರುವ ರಸ್ತೆಯನ್ನು ಅಭಿವೃದ್ಧಿಗೊಳಿಸಿದರೆ 2.ಕಿಮೀ ಸುತ್ತಿ ಬರುವ ಸಂಕಷ್ಟ ಭಕ್ತರಿಗೆ ತಪ್ಪಲಿದೆ.

ಶ್ರೀಗುಹೇಶ್ವರ ದೇವಸ್ಥಾನದಿಂದ ಪೊಲೀಸ್ ಠಾಣೆ ಸನಿಹವಿರುವ ರಾಷ್ಟ್ರೀಯ ಹೆದ್ದಾರಿ-66 ರ ಅಂಡರ್ ಪಾಸ್ ಹತ್ತಿರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 300.ಮೀ ನಷ್ಟು ಉದ್ದವಿರುವ ರಸ್ತೆ ಅಭಿವೃದ್ಧಿಗೊಳ್ಳದೆ 50 ಕ್ಕೂ ಅಕ ವರ್ಷಗಳೆ ಕಳೆದು ಹೋಗಿದೆ.
ಮಣ್ಣಿನ ರಸ್ತೆಯನ್ನು ಅಭಿವೃದ್ಧಿಗೊಳಿಸುವುದರ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು.ರಸ್ತೆ ಅಭಿವೃದ್ಧಿಗೊಂಡರೆ ಶ್ರೀಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಲಿದೆ- ವ್ಯವಸ್ಥಾಪನ ಸಮಿತಿ ಅಧ್ಯಕ್ಷರು

ವರದಿ-ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು