ಕುಂದಾಪುರ, ಡಿ.25 : ಹೈದರಬಾದಿನಿಂದ ಕುಂದಾಪುರಕ್ಕೆ ಬಸ್ ಮೂಲಕ ಗಾಂಜಾ ಸಾಗಿಸುತ್ತಿದ್ದ ಓರ್ವನನ್ನು ಬಸ್ರೂರು ಮೂರುಕೈ ಬಳಿ ಡಿ.24ರಂದು ರಾತ್ರಿ 11ಗಂಟೆ ಸುಮಾರಿಗೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ತಂಡ ಬಂಧಿಸಿದೆ.
ಕುಂದಾಪುರ ವಿಠಲವಾಡಿಯ ಚಟ್ಕೆರೆ ನಿವಾಸಿ ವಿಶ್ವಪ್ರಸನ್ನ ಗೋಡೆ(20) ಬಂಧಿತ ಆರೋಪಿ. ಬಂಧಿತನ ಬ್ಯಾಗ್ನಲ್ಲಿದ್ದ 20ಸಾವಿರ ರೂ. ಮೌಲ್ಯದ 1 ಕೆ.ಜಿ 84 ಗ್ರಾಂ ತೂಕದ ಗಾಂಜಾ, 250ರೂ. ನಗದು ಮತ್ತು ಒಂದು ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.