ಮಂಗಳೂರು: ಎಂಆರ್ಪಿಎಲ್ ನೌಕರರ ಮನರಂಜನಾ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರಣ್ಯ ಇಲಾಖೆಯ ಡಿಸಿಎಫ್ ಡಾ ವೈ ಕೆ ದಿನೇಶ್ ಕುಮಾರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಡುಂಬು ನದಿಯ ಪರಿಸರ ಪುನಶ್ಚೇತನ ಮತ್ತು ಪುನರುಜ್ಜೀವನಕ್ಕಾಗಿ ಅರಣ್ಯ ಇಲಾಖೆಯೊಂದಿಗೆ ಎಂಒಯುಗೆ ಸಹಿ ಹಾಕಲು ಎಂಆರ್ಪಿಎಲ್ ನಿರ್ಧಾರ ಕೈಗೊಂಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಎಂಆರ್ಪಿಎಲ್ ಇಡಿ ರಿಫೈನರಿ ಎಸ್ ಪಿ ಕಾಮತ್, ಪರವಾಗಿ ಮತ್ತು ಡಾ ವೈ ಕೆ ದಿನೇಶ್ ಕುಮಾರ್ ಅವರು ಕರ್ನಾಟಕದ ಅರಣ್ಯ ಇಲಾಖೆ ಪರವಾಗಿ ಎಂಒಯುಗೆ ಸಹಿ ಹಾಕಿದರು.
ಸುರತ್ಕಲ್ನ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿಗಳು ‘ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ’ ಎಂಬ ವಿಷಯದ ಕುರಿತು ಬೀದಿನಾಟಕವನ್ನು ಪ್ರಸ್ತುತಪಡಿಸಿದರು.
ಕೆಎಸ್ಪಿಸಿಬಿಯ ಪರಿಸರ ಅಧಿಕಾರಿ ಡಾ.ರವಿ ಡಿಆರ್ ಮಾತನಾಡಿ, ‘ಪರಿಸರ ಸಂರಕ್ಷಣೆಗಾಗಿ ನಾವು ಜಾಗೃತರಾಗಬೇಕು’ ಎಂದರು. ಐಎಫ್ಎಸ್ ಸಿವಿಒ ಗಣೇಶ್ ಎಸ್ ಭಟ್, ಮಾತನಾಡಿದರು. ವೈಯಕ್ತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ವಿವಿಧ ಕ್ರಮಗಳನ್ನು ಪ್ರಸ್ತಾಪಿಸಿದರು.
ಕುಡುಂಬೂರು ನದಿ ಪುನರುಜ್ಜೀವನದ ಯೋಜನೆಗೆ ಕೊಡುಗೆ ನೀಡಲು ಹಣಕಾಸು ನಿರ್ದೇಶಕರಾದ ವಿವೇಕ್ ಸಿ ಟೊಂಗಾಂವ್ಕರ್ ಸಂತೋಷ ವ್ಯಕ್ತಪಡಿಸಿದರು. ಸಂಸ್ಕರಣಾಗಾರ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ವರ್ಮಾ, ಮಾತನಾಡಿ, “ನಾವು ನಮ್ಮ ಭೂಮಿಯನ್ನು ತಾಯಿಯ ಭೂಮಿ ಎಂದು ಕರೆಯುತ್ತೇವೆ. ಈಗ ನಾವು ಭೂಮಿಯನ್ನು ನಮ್ಮ ತಾಯಿಯ ರೀತಿ ನೋಡಿಕೊಳ್ಳಬೇಕು.
ಹವಾಮಾನ ಬದಲಾವಣೆಯಿಂದಾಗಿ ನಮ್ಮ ಭೂಮಿಯಲ್ಲಿ ವೈಪರೀತ್ಯಗಳು ಸಂಭವಿಸುತ್ತಿವೆ. ನೀರಿನ ಲಭ್ಯತೆ ಕ್ಷೀಣಿಸಿದೆ ಎಂದರು. ಈ ನಿಟ್ಟಿನಲ್ಲಿ ತ್ಯಾಜ್ಯ ಸಮರ್ಪಕ ನಿರ್ವಹಣೆ ಅಗತ್ಯ ಎಂದರು.
ಎಂ.ಎಸ್.ಪವಿತ್ರಾ, ಇಂಜಿನಿಯರ್ ಎಚ್.ಎಸ್.ಇ ಬಹುಮಾನ ವಿತರಣೆ ಸಂಯೋಜಿಸಿದರು. ಕಾಂಚನ್ ದೇಶವಾಲ್ ನಿರೂಪಿಸಿದರು. ಪ್ರಸನ್ನ ಕುಮಾರ್ ಪ್ರಸ್ತಾಪಿಸಿದರು.