News Karnataka Kannada
Friday, May 10 2024
ಮಂಗಳೂರು

ಮಂಗಳೂರು ನಗರಕ್ಕೆ ನೀರಿನ ಕೊರತೆ, ರೇಷನಿಂಗ್‌ಗೆ ಚಿಂತನೆ

ಸಚಿವ ಬಿ.ನಾಗೇಂದ್ರ ತವರು ಕ್ಷೇತ್ರದಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಗಿನ ಡೋಣಿ ಗ್ರಾಮದಲ್ಲಿ ಒಂದು ಹನಿ ನೀರು ಬರುತ್ತಿಲ್ಲ. ದಿನ ನಿತ್ಯದ ಬಳಕೆ ಹಾಗೂ ಕುಡಿಯುವ ನೀರಿಗಾಗಿ ಜನರು ಸಂಕಷ್ಟ ಪಡುತ್ತಿದ್ದಾರೆ.
Photo Credit : News Kannada

ಮಂಗಳೂರು: ನಗರದಲ್ಲಿ ಕುಡಿಯು ನೀರಿನ ಕೊರತೆ ಬಿಗಡಾಯಿಸಿದ್ದು, ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ರೇಷನಿಂಗ್‌ಗೆ ಪಾಲಿಕೆ ಚಿಂತನೆ ನಡೆಸಿದೆ. ಮೊದಲಿಗೆ 2 ದಿನಕ್ಕೊಮ್ಮೆ ರೇಷನಿಂಗ್‌ ಪದ್ಧತಿ ಜಾರಿಗೆ ತರಲು ಪಾಲಿಕೆ ಮುಂದಾಗಿದೆ.  ಪ್ರಸ್ತುತ ತುಂಬೆ ಡ್ಯಾಂನಲ್ಲಿ 5.57 ಮೀಟರ್‌ ನೀರು ಸಂಗ್ರಹವಿದೆ. ಅಂತೆಯೇ ಎಎಂಆರ್‌ ನಲ್ಲಿ 14.17 ಮೀಟರ್‌ ನೀರಿನ ಸಂಗ್ರಹವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೈಗಾರಿಕೆಗಳಿಗಿಲ್ಲ ನೀರು: ಮೂಲಗಳ ಪ್ರಕಾರ ಎಎಂಆರ್‌ ಡ್ಯಾಂನಿಂದ ಕೈಗಾರಿಕೆಗಳಿಗೆ ನೀರು ಸರಬರಾಜು ನಿಲ್ಲಿಸಲಾಗಿದೆ. ಡ್ಯಾಂನಲ್ಲಿರುವ ನೀರು ಬಿಸಿಲಿನ ಝಳಕ್ಕೆ ಆವಿಯಾಗುತ್ತಿದೆ. ಮತ್ತೊಮ್ಮೆ ತುಂಬೆ ಡ್ಯಾಂಗೆ ನೀರು ಹರಿಸುವ ಬಗ್ಗೆ ಜಿಲ್ಲಾಡಳಿತ, ಪಾಲಿಕೆ ಚಿಂತಿಸಿಬೇಕಿದೆ. ಸದ್ಯ ತುಂಬೆ ಡ್ಯಾಂನಲ್ಲಿ 5.57 ಮೀಟರ್‌ ನೀರು ಸಂಗ್ರಹವಿದೆ. ಮತ್ತೊಮ್ಮೆ ಎಎಂಆರ್‌ ಡ್ಯಾಂನಿಂದ ನೀರು ಹರಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಪಾಲಿಕೆ ಆಯುಕ್ತ ಚನ್ನಬಸಪ್ಪ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು