ಮಂಗಳೂರು : ಹೋಳಿಯ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸಿದರೆ ಪರಿಣಾಮ ನೆಟ್ಟಗಿರದು ಎಂದು ಬಜರಂಗದಳದ ಪುನೀತ್ ಅತ್ತಾವರ ಎಚ್ಚರಿಕೆ ಸಂದೇಶ ನೀಡಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಎಚ್ಚರಿಕೆ ಸಂದೇಶ ನೀಡಿರುವ ಪುನೀತ್ ಅತ್ತಾವರ, ಕಳೆದ ಬಾರಿ ಮರಳೀಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಪರಿಣಾಮ ಏನಾಗಿತ್ತು ಎಂದು ನೆನಪಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಹೋಳಿ ಹಬ್ಬಕ್ಕೆ ಧಾರ್ಮಿಕ ಹಿನ್ನಲೆ ಇದ್ದು, ಇತ್ತೀಚೆಗೆ ಅದು ಮೋಜು ಮಸ್ತಿ ಮಾಡಲು ಒಂದು ಅವಕಾಶ ಎಂಬಂತ್ತೆ ಆಚರಿಸಲಾಗುತ್ತಿದೆ. ಹೋಳಿ ಹೆಸರಿನಲ್ಲಿ ಗಾಂಜಾ , ಡ್ರಗ್ಸ್ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಳಾಗ್ತಾ ಇದ್ದಾರೆ. ಹೀಗಾಗಿ ಇಂತಹ ಕಾರ್ಯಕ್ರಮಗಳಿಗೆ ಪೊಲೀಸರು ಅನುಮತಿ ನೀಡಬಾರದು.
ಹಾಗೊಂದು ವೇಳೆ ನೀಡಿದ್ರೆ ಅದರ ಪರಿಣಾಮವನ್ನು ಸಂಘಟಕರೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ