News Karnataka Kannada
Monday, April 29 2024
ಮಂಗಳೂರು

ಉಳ್ಳಾಲ: ಹುಲಿ ವೇಷ ಹಾಕಿ ಅದರಿಂದ ಬಂದ ದೇಣಿಗೆಯನ್ನು ಕ್ಯಾನ್ಸರ್ ಪೀಡಿತರಿಗೆ ನೀಡಿದ ಯುವಕರು

Young men dressed up as tigers and donated donations to cancer patients
Photo Credit : News Kannada

ಉಳ್ಳಾಲ : ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವ ಸಂದರ್ಭ ಹುಲಿ ವೇಷ ಹಾಕಿ ಕುಣಿದ ಯುವಕರು ಅದರಿಂದ ಬಂದ ದೇಣಿಗೆ ಮೊತ್ತವನ್ನ ಕ್ಯಾನ್ಸರ್ ಪೀಡಿತರು ಮತ್ತು ಅಶಕ್ತರಿಗೆ ನೀಡಿ ಮಾದರಿಯಾಗಿದ್ದಾರೆ.

ಮೊನ್ನೆ ತೊಕ್ಕೊಟ್ಟಲ್ಲಿ ನಡೆದ 2022ರ ಸಾಲಿನ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯಲ್ಲಿ ಉಳ್ಳಾಲ ಬೈಲಿನ ವೈದ್ಯನಾಥ ಫ್ರೆಂಡ್ಸ್ (ರಿ) ಹಾಗೂ ಟೀಮ್ ಛತ್ರಪತಿ ತಂಡವು ಹುಲಿ ವೇಷದ ಟ್ಯಾಬ್ಲೋ ಇಳಿಸಿ ಜನರನ್ನ ರಂಜಿಸಿತ್ತು. ಹುಲಿ ವೇಷಧಾರಿಗಳು ತೊಕ್ಕೊಟ್ಟು ಪರಿಸರದ ಮನೆ, ಮಳಿಗೆಗಳ ಅಂಗಳದಲ್ಲಿ ಕುಣಿದು ಅದರಿಂದ ಬಂದ ದೇಣಿಗೆಯಲ್ಲಿ ಉಳಿದ 60,000 ರೂ. ಹಣವನ್ನ ಸಮಾಜದ ದುರ್ಬಲರಿಗೆ ನೀಡಿದ್ದಾರೆ.

ಹುಲಿ ವೇಷದಿಂದ ಬಂದ ದೇಣಿಗೆ ಹಣವನ್ನ ಸ್ವಂತಕ್ಕೆ ಬಳಸದೆ ಸಮಾಜದ ಅಶಕ್ತರಿಗೆ ನೀಡುವ ಮೂಲಕ ಮಾದರಿಯಾದ ವೈದ್ಯನಾಥ ಫ್ರೆಂಡ್ಸ್ , ಟೀಮ್ ಛತ್ರಪತಿ ತಂಡದ ಸೇವಾ ಕಾರ್ಯವು ಜನರ ಶ್ಲಾಘನೆಗೆ ಪಾತ್ರವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು