ಉಳಾಯಿಬೆಟ್ಟು: ಶ್ರೀ ಮಹಾ ಮಾಯಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇವರ ಜಂಟಿ ಆಶ್ರಯದಲ್ಲಿ ಹಾಗೂ ಎ ಜೆ ಆಸ್ಪತ್ರೆ ರಕ್ತ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ ಬ್ರಹತ್ ರಕ್ತ ದಾನ ಶಿಬಿರ ಇಂದು ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ಸಭಾ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರಾದ ಹರಿ ಕೇಶ ಶೆಟ್ಟಿ ನಡಿಗುತ್ತು,ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಅಧ್ಯಕ್ಷ ವಿಕ್ಟರ್ ಮೊರಾಸ್, ರಕ್ತ ನಿಧಿ ಕೇಂದ್ರದ ಮ್ಯಾನೇಜರ್ ಗೋಪಾಲಕೃಷ್ಣ, ಮಹ ಮಾಯಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ತಲ್ಲಿ ಮಾರ್ , ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇದರ ಕೋಶಾಧಿಕಾರಿ ರಾಕೇಶ್ ಶೆಟ್ಟಿ, ಪಂಚಾಯತ್ ಸದಸ್ಯ ವಿಶ್ವನಾಥ ಶೆಟ್ಟಿ ಉಳಾಯಿಬೆಟ್ಟು ಗುತ್ತು, ಕಮಲಾಕ್ಷ ತಲ್ಲಿ ಮಾರ್, ರಮಾನಾಥ ಕಿನ್ನಿ ಬೆಟ್ಟು ಉಪಸ್ಥಿತರಿದ್ದರು.
ರಕ್ತ ಕೇಂದ್ರದ ಗೋಪಾಲ ಕೃಷ್ಣ ರಕ್ತದಾನದ ಮಾಹಿತಿ ನೀಡಿದರು.ಜಯರಾಂ ರೈ ಸ್ವಾಗತಿಸಿದರು.ಸುಮಾರು 60ಕ್ಕು ಅಧಿಕ ಮಂದಿ ರಕ್ತ ದಾನ ಮಾಡಿದರು.