News Karnataka Kannada
Friday, May 10 2024
ಮಂಗಳೂರು

ಮಂಗಳೂರು: ಮರ್ಹೂಂ ಶರೀಫ್ ಸ್ಮರಣಾರ್ಥ ಸೌಹಾರ್ದ ಫ್ರೆಂಡ್ಸ್ ಅಮ್ಟೂರು ವತಿಯಿಂದ ಬೃಹತ್ ರಕ್ತದಾನ ಶಿಬಿರ

Mng
Photo Credit : News Kannada

ಮಂಗಳೂರು: ಸೌಹಾರ್ದ ಫ್ರೆಂಡ್ಸ್ ಅಮ್ಟೂರು ವತಿಯಿಂದ ಇತ್ತೀಚಿಗೆ ಅವಘಡದಿಂದ ಅಗಲಿದ ಶರೀಫ್ ಅಮ್ಟೂರು ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ ಇಂಡಿಯನ್ ರೆಡ್ ಕ್ರಾಸ್‌ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಸಹಯೋಗದೊಂದಿಗೆ ದೇವಮಾತ ಶಾಲೆ ಅಮ್ಟೂರು ಇಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬದ್ರಿಯ ಜುಮ್ಮಾ ಮಸೀದಿ ಅಮ್ಟೂರು ಇದರ ಖತೀಬರಾದ ಮುಸ್ತಫಾ ‌ಸಹದಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದರ್ ಆಫ್ ಗಾಡ್ ಚರ್ಚ್ ಮೊಗರ್ನಾಡು ಇದರ ರೆವರೆಂಡ್ ಫಾದರ್ ಪೌಲ್ ಪಿಂಟೊ ನೆರವೇರಿಸಿದರು.

ವೇದಿಕೆಯಲ್ಲಿ ಶ್ರೀ ಮಂತ್ರದೇವತಾ ಸಾನಿದ್ಯ ಅಮ್ಟೂರು ಇದರ ಪ್ರದಾನರಾದ ಮಾನೋಜ್ ಕುಮಾರ್ ಕಟ್ಟೆಮಾರ್, ಮಂಗಳೂರು ವಿಶ್ವವಿದ್ಯಾಲಯ ಇದರ ಪ್ರೊಫೆಸರ್ ಡಾ.ಯಶುಕುಮಾರ್ ಡಿ, ದೇವಮಾತ ಶಾಲೆ ಅಮ್ಟೂರು ಇದರ ಅಧ್ಯಾಪಕರದ ಎಮಿಲಿಯಾನ ಡಿಕುನ್ಹ, ಅಬ್ದುಲ್ ರಝಾಕ್ ಅಮ್ಜದಿ,‌ಪಂಚಾಯತ್ ಸದಸ್ಯರಾದ ರಾಘವ ಪೂಜಾರಿ ಉಪಸ್ಥಿತರಿದ್ದರು.ಆಸಿಫ್ ಅಮ್ಟೂರು ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸರ್ವಧರ್ಮಿಯ ರಕ್ತದಾನಿಗಳಿಂದ 110 ಯುನಿಟ್ ರಕ್ತ ಸಂಗ್ರಹಿಸುವ ಮೂಲಕ ಶಿಬಿರವು ಸೌಹಾರ್ದಕ್ಕೆ ಸಾಕ್ಷಿಯಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು