News Karnataka Kannada
Friday, May 03 2024
ಮಂಗಳೂರು

ಉಜಿರೆ: ಗಡಾಯಿಕಲ್ಲು ಹೆಚ್ಚುವರಿ ವ್ಯವಸ್ಥೆ, ಸಿಸಿ ಟಿವಿ ಅಳವಡಿಕೆ

Ujire: Gadaikallu additional system, installation of CCTV cameras
Photo Credit : By Author

ಉಜಿರೆ: ಕಳೆದ ಕೆಲವು ವಾರಗಳ ಹಿಂದೆ ಬೆಳ್ತಂಗಡಿಯ ಗಡಾಯಿಕಲ್ಲಿನಲ್ಲಿ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಪ್ರವಾಸಿಗರಿಗೆ ಟಿಕೆಟ್ ನೀಡದೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಮಾಹಿತಿ ತಿಳಿದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳಕ್ಕಾಗಮಿಸಿ ಸ್ಥಳದಿಂದಲೇ ಕರೆ ಮಾಡಿ ಮೇಲಾಧಿಕಾರಿಗಳಿಗೆ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಲು ಸೂಚಿಸಿದ್ದರು.

ಬಳಿಕ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಆರ್.ಎಫ್ ಒ ಸ್ವಾತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರವಾಸಿಗರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಈ ಬಗ್ಗೆ ನ‌. 22ರ ವಿಜಯ ಕರ್ನಾಟಕದಲ್ಲಿ ವರದಿ ಪ್ರಕಟವಾಗಿತ್ತು. ಇದೀಗ ಹಿರಿಯ ಅಧಿಕಾರಿಗಳು ಅವ್ಯವಸ್ಥೆಯನ್ನು ಸರಿಪಡಿಸಿ‌ ಖುದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ವನ್ಯಜೀವಿ ಕಾರ್ಕಳ ವಿಭಾಗದ ಡಿಎಫ್ ಒ , ಎಸಿಎಫ್ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿ ಗಡಾಯಿಕಲ್ಲಿನಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬಹುದು ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಸಿಸಿ‌ ಟಿವಿ ಕ್ಯಾಮೆರಾ ಅಳವಡಿಕೆ

ಗಡಾಯಿಕಲ್ಲಿನ ಮೂರು ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಜತೆಗೆ ಟಿಕೆಟ್ ಹಣದಲ್ಲಿ ನಡೆಯುತ್ತಿದ್ದ ಅವ್ಯವಹಾರಕ್ಕೆ
ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು ಕುದುರೆಮುಖ ನ್ಯಾಷನಲ್ ಪಾರ್ಕ್ ಡಾಟ್ ಇನ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಬುಕ್ ಮಾಡುವ ಅವಕಾಶ ಕಲ್ಪಿಸಿದ್ದಾರೆ. ಜತೆಗೆ ಮಹಿಳೆಯರಿಗೆ ಶೌಚಾಲಯ ಅವ್ಯವಸ್ಥೆಯನ್ನು ಸಮಪರ್ಕಪವಾಗಿ ಮಾಡಲಾಗಿದ್ದು ಮುಂದಿನ ದಿನದಲ್ಲಿ ಕುಡಿಯುವ‌ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆ. ಅದಲ್ಲದೆ ಇನ್ನು ಮುಂದೆ ಗಡಾಯಿಕಲ್ಲಿಗೆ ಬರುವ ಪ್ರವಾಸಿಗರೆಲ್ಲರ ಸರಿಯಾದ ದಾಖಲೆಗಳನ್ನು ಪಡೆದುಕೊಂಡು ನಂತರ ಪ್ರವೇಶ ಅವಕಾಶ ನೀಡಲಾಗುವುದು ಸುತ್ತಮುತ್ತಲಿನಲ್ಲಿ ವಾತಾವರಣವನ್ನು ವನ್ಯಜೀವಿ ಅಧಿಕಾರಿಗಳ ಮತ್ತು ಸಿಸಿಕ್ಯಾಮರಗಳು ನಿಗಾ ಇಡಲಾಗುತ್ತದೆ ಅದಲ್ಲದೆ ಆನ್ ಲೈನ್ ಮೂಲಕ ಮೊಬೈಲ್ ನಲ್ಲಿ ಇಲ್ಲಿನ ಸ್ಥಿತಿಗಳ ಬಗ್ಗೆ ಆಗಾಗ ಪರಿಶೀಲನೆ ನಡೆಸುತ್ತಿರುತ್ತೇವೆ ಎಂದು ವನ್ಯಜೀವಿ ಕಾರ್ಕಳ ವಿಭಾಗದ ಡಿಎಫ್ ಒ ಗಣಪತಿ ಹೇಳಿದ್ದಾರೆ.

ಗಡಾಯಿಕಲ್ಲು ಭೇಟಿ ವೇಳೆ ಕಾರ್ಕಳ ವನ್ಯಜೀವಿ ವಿಭಾಗದ ಡಿಎಫ್ ಒ ಗಣಪತಿ, ಕಾರ್ಕಳ ವನ್ಯಜೀವಿ ವಿಭಾಗದ ಎಸಿಎಫ್ ಖಜಾಲ್ ಪಾಟೀಲ್,ಬೆಳ್ತಂಗಡಿ ವನ್ಯಜೀವಿ ವಲಯ ಆರ್.ಎಫ್.ಒ ಸ್ವಾತಿ,ಉಪ ವಲಯ ಅರಣ್ಯಾಧಿಕಾರಿ ಕಿರಣ್ ಪಾಟೀಲ್,ಗಸ್ತು ಅರಣ್ಯ ಪಾಲಕರಾದ ಸುರೇಶ್, ರಾಘವೇಂದ್ರ , ಹರೀಶ್,ಉಮೇಶ್ ಇದ್ದರು.

“ಗಡಾಯಿಕಲ್ಲು ಪ್ರವಾಸಿಗರಿಗೆ ಆನ್ ಲೈನ್ ಟಿಕೆಟ್ ವ್ಯವಸ್ಥೆ ಹಾಗೂ ಮೇಲ್ಗಡೆ ತುರ್ತು ಕೆಲವು ಸೌಕರ್ಯಗಳನ್ನು ಮಾಡಲಾಗಿದೆ.ಪ್ರತಿದಿನ ಇಲ್ಲಿನ ಮಾಹಿತಿ ಆಗು ಹೋಗುಗಳ ಮಾಹಿತಿ ಕಲೆ ಹಾಕಲಾಗುತ್ತಿದೆ.ಪ್ರವಾಸಿಗರಿಗೆ ಪ್ಲಾಸ್ಟಿಕ್ ವಸ್ತು ಒಯ್ಯದಂತೆ ಸೂಚನೆ ನೀಡಲಾಗಿದೆ.ಇಲ್ಲಿಗೆ ಬೇಕಾದ ಹೆಚ್ಚುವರಿ ವ್ಯವಸ್ಥೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ”

ಸ್ವಾತಿ, ಆರ್ ಎಫ್ ಒ,ವನ್ಯ ಜೀವಿ ವಿಭಾಗ,ಬೆಳ್ತಂಗಡಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು