ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರು ಹೇಳಿಕೆ ಕುರಿತು ಸಚಿವ ಸಂತೋಷ್ ಲಾಡ್, ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರವನ್ನು ಕೆಡವುವಲ್ಲಿ ಬಿಜೆಪಿಯವರು ಅನುಭವಿಗಳು ಎಂದು ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಬೀಳುತ್ತದೆ ಎಂಬಂತಹ ಹೇಳಿಕೆ ನೀಡುವುದು ಬಿಜೆಪಿಯವರ ಅಭ್ಯಾಸ. 5 ಸಾವಿರ ಕೋಟಿ ಖರ್ಚು ಮಾಡಿ ಈವರೆಗೆ 500 ಶಾಸಕರನ್ನು ಖರೀದಿ ಮಾಡಿದ್ದಾರೆ. ಈ ರೀತಿಯ ವ್ಯವಹಾರ ಮಾಡಿ ಅವರಿಗೆ ಅಭ್ಯಾಸವಿದೆ ಎಂದು ಹೇಳಿದ್ದಾರೆ.
ಕಳೆದ ಬಾರಿ 16 ಶಾಸಕರನ್ನು ಹೇಗೆ ಕರೆದುಕೊಂಡರು? ಅವರಿಗೆ ರೊಕ್ಕ ನೀಡಿ ಸರ್ಕಾರ ಬೀಳಿಸಿ ಅವರನ್ನು ಮಂತ್ರಿ ಮಾಡಿದರು. ಈ ಟ್ಯಾಲೆಂಟ್, ದುಡ್ಡು ಮೇಲೆ ಅವರಿಗೆ ನಂಬಿಕೆಯಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರುವ ಅನುಭವ ಬಿಜೆಪಿಯವರಿಗಿದೆ. 136 ಶಾಸಕರು ಆಯ್ಕೆಯಾಗಿರುವ ಪಾರ್ಟಿಯ ಸರ್ಕಾರವನ್ನು ಬೀಳಿಸುತ್ತೇವೆ ಅಂತಿದ್ದಾರೆ. ಆರು ತಿಂಗಳಿಂದ ಇದನ್ನು ನಾವು ಕೇಳುತ್ತಿದ್ದೇವೆ. ಇದು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ವ ಎಂದು ಕೇಳಿದರು.