ಸುರತ್ಕಲ್: “ಸೇವಾ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪಿಸುವ ಕೆಲಸ ನಮ್ಮ ಸಂಸ್ಥೆಯದಾಗಿದೆ” ಎಂದು ಬಿಎಂಆರ್ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ದಾವುದ್ ಹಕೀಂ ತಿಳಿಸಿದರು.
ಅವರು ಚೊಕ್ಕಬೆಟ್ಟುವಿನ ಎಂಜಿಎಂ ವಠಾರದಲ್ಲಿ ನಡೆದ ಬಿಎಂಆರ್ ಸಮೂಹ ಸಂಸ್ಥೆಯ ವತಿಯಿಂದ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಮಾಡಲು ಉದ್ದೇಶಿಸಿದ್ದ ಇನ್ನಷ್ಟು ಸೇವಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೃಷ್ಣಾಪುರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಬಿ ಎಂ ಮಮ್ತಾಜ್ ಅಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸೇವಾ ಕಾರ್ಯಕ್ರಮಗಳಿಗೆ ಜಮಾತ್ ವತಿಯಿಂದ ಸರ್ವ ಸಹಕಾರ ನೀಡಲಾಗುವುದು ಎಂದರು.
ಮಾಜಿ ಅಧ್ಯಕ್ಷ ಜಲೀಲ್ ಬದ್ರಿಯಾ, ಬಿಎಮ್ಆರ್ ಸಂಸ್ಥೆಯ ಚೇರ್ಮನ್ ಇಬ್ರಾಹಿಂ ಕೃಷ್ಣಾಪುರ, ಮಂಗಳಪೇಟೆಯ ಮಸೀದಿಯ ಅಧ್ಯಕ್ಷ ಹಸನಬ್ಬ ಮಂಗಳಪೇಟೆ, ಸೆರೆಕಲ್ ಸಂಸ್ಥೆಯ ಪ್ರಾಂತೀಯ ಪ್ರಬಂಧಕ ಪ್ರದೀಪ್, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಯುವ ಮೋರ್ಚಾದ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಮಾರುಕಟ್ಟೆ ವಿಭಾಗದ ಮಸೂದ್ ಕಾಟಿಪಳ್ಳ ಉಪಸ್ಥಿತರಿದ್ದರು.
ಬಿಎಂಆರ್ ಸಂಸ್ಥೆಯ ಪ್ರಬಂಧಕ ಹನೀಫ್ ಕೃಷ್ಣಾಪುರ ವಂದಿಸಿದರು, ವಿಜೆಡಿಕ್ಷನ್ ನಿರೂಪಿಸಿದರು. ಸೆರೆಕೇರ್ ಅಫ್ ಇಂಡಿಯಾ ಸಂಸ್ಥೆ ಯ ತಜ್ಞ ವೈದ್ಯಕೀಯ ತಂಡದ ನೇತ್ರತ್ವಸಲ್ಲಿ ನಡೆದ ಶಿಬಿರದ ಸದುಪಯೋಗವನ್ನು ಸುಮಾರು 850 ಜನರು ಪಡೆದರು.