News Karnataka Kannada
Sunday, April 28 2024
ಸಮುದಾಯ

ಸುರತ್ಕಲ್: ಬಿಎಂಆರ್ ಸಮೂಹ ಸಂಸ್ಥೆಯ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

BMR Group of Companies organises free medical camp
Photo Credit : News Kannada

ಸುರತ್ಕಲ್: “ಸೇವಾ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪಿಸುವ ಕೆಲಸ ನಮ್ಮ ಸಂಸ್ಥೆಯದಾಗಿದೆ” ಎಂದು ಬಿಎಂಆರ್ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ದಾವುದ್ ಹಕೀಂ ತಿಳಿಸಿದರು.

ಅವರು ಚೊಕ್ಕಬೆಟ್ಟುವಿನ ಎಂಜಿಎಂ ವಠಾರದಲ್ಲಿ ನಡೆದ ಬಿಎಂಆರ್ ಸಮೂಹ ಸಂಸ್ಥೆಯ ವತಿಯಿಂದ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಮಾಡಲು ಉದ್ದೇಶಿಸಿದ್ದ ಇನ್ನಷ್ಟು ಸೇವಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೃಷ್ಣಾಪುರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಬಿ ಎಂ ಮಮ್ತಾಜ್ ಅಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸೇವಾ ಕಾರ್ಯಕ್ರಮಗಳಿಗೆ ಜಮಾತ್ ವತಿಯಿಂದ ಸರ್ವ ಸಹಕಾರ ನೀಡಲಾಗುವುದು ಎಂದರು.

ಮಾಜಿ ಅಧ್ಯಕ್ಷ ಜಲೀಲ್ ಬದ್ರಿಯಾ, ಬಿಎಮ್ಆರ್ ಸಂಸ್ಥೆಯ ಚೇರ್ಮನ್ ಇಬ್ರಾಹಿಂ ಕೃಷ್ಣಾಪುರ, ಮಂಗಳಪೇಟೆಯ ಮಸೀದಿಯ ಅಧ್ಯಕ್ಷ ಹಸನಬ್ಬ ಮಂಗಳಪೇಟೆ, ಸೆರೆಕಲ್ ಸಂಸ್ಥೆಯ ಪ್ರಾಂತೀಯ ಪ್ರಬಂಧಕ ಪ್ರದೀಪ್, ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಯುವ ಮೋರ್ಚಾದ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಮಾರುಕಟ್ಟೆ ವಿಭಾಗದ ಮಸೂದ್ ಕಾಟಿಪಳ್ಳ ಉಪಸ್ಥಿತರಿದ್ದರು.

ಬಿಎಂಆರ್ ಸಂಸ್ಥೆಯ ಪ್ರಬಂಧಕ ಹನೀಫ್ ಕೃಷ್ಣಾಪುರ ವಂದಿಸಿದರು, ವಿಜೆಡಿಕ್ಷನ್ ನಿರೂಪಿಸಿದರು. ಸೆರೆಕೇರ್ ಅಫ್ ಇಂಡಿಯಾ ಸಂಸ್ಥೆ ಯ ತಜ್ಞ ವೈದ್ಯಕೀಯ ತಂಡದ ನೇತ್ರತ್ವಸಲ್ಲಿ ನಡೆದ ಶಿಬಿರದ ಸದುಪಯೋಗವನ್ನು ಸುಮಾರು 850 ಜನರು ಪಡೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು