ಮಂಗಳೂರು: ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಇದರ ವಾರ್ಡ್ ಪಾಂಡೇಶ್ವರ ಓಲ್ಡ್ ಕೆಂಟ್ ರೋಡ್ ನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು.
ಪಕ್ಷದ ಅಭ್ಯರ್ಥಿಯಾದ ಡಾ. ಸುಮತಿ ಎಸ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರ್ಡ್ ಅಧ್ಯಕ್ಷರಾಗಿ ಚಂದ್ರಾವತಿ ಪಾಂಡೇಶ್ವರ, ಶ್ವೇತಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ರತ್ನಾಕರ ಸುವರ್ಣ ಈ ಬಾರಿ ಜನತಾದಳದ ಜನಪರ ಕಾರ್ಯಕ್ರಮ ವಾದ ಪಂಚರತ್ನ ದಿಂದ ಜನತೆ ಜೆಡಿಎಸ್ ಗೆ ಮತ ನೀಡಲಿದ್ದಾರೆ ಎಂದರು. ಪಕ್ಷದ ಅಭ್ಯರ್ಥಿ ಸುಮತಿ ಹೆಗ್ಡೆ ಮಾತನಾಡಿ ತನ್ನನ್ನು ನೀವು ಆಯ್ಕೆ ಮಾಡಿದಲ್ಲಿ ನುಡಿದಂತೆ ಕ್ಷೇತ್ರದ ಸರ್ವಾಂಗೀನ ಅಭಿವ್ರಧ್ಧಿ ಮಾಡಲು ಗರಿಷ್ಠ ರೀತಿಯಲ್ಲಿ ಶ್ರಮವಹಿಸುತ್ತೇನೆ ಎಂದರು.
ಈ ಸಂಧರ್ಭ ರಾಜ್ಯ ಮೀನುಗಾರಿಕಾ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ, ಮಂಗಳೂರು ದಕ್ಷಿಣ ಕ್ಷೇತ್ರದ ಪ್ರ.ಕಾರ್ಯದರ್ಶಿ ಪ್ಯಾಟ್ರಿಕ್ ಮಿಲ್ಟೊನ್, ಶಾರದಾ ಶೆಟ್ಟಿ, ಕವಿತಾ, ಚೂಡಾಮಣಿ, ದಿನೇಶ್ ಪಯಿಸ್, ಜಾವೇದ್ ಪಾಂಡೇಶ್ವರ, ಮನೋಜ್ ಕುಮಾರ್, ಲತೀಫ್ ಶಿವಭಾಗ್, ಪ್ರವೀಣ್, ಪ್ರಿಯಾ ಸಾಲಿಯಾನ್, ನಂತೂರು ವಲಯಾಧ್ಯಕ್ಷ ಜಯರಾಂ, ಬಸವರಾಜ್, ನೀಲಾ,ಗಿರಿಜಾ ಹಾಗೂ ಹಲವು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ವಿನ್ಸೆಂಟ್ ಪೆರೇರಾ ವಂದಿಸಿದರು. ಮಂಗಳೂರು ದಕ್ಷಿಣ ಕ್ಷೇತ್ರ ಪ್ರ. ಕಾರ್ಯದರ್ಶಿ ಅಲ್ತಾಫ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.