ನಮ್ಮ ಆರೋಗ್ಯವನ್ನು ಕಾಪಾಡಲು ಸಿರಿಧಾನ್ಯಗಳನ್ನು ಒಂದು ಪ್ರಮುಖ ಅಂಶವಾಗಿದೆ ಎಂದು ನಾವು ಅಂದುಕೊಂಡಿರುತ್ತೇವೆ. ಆದರೆ ಪ್ರತಿಯೊಬ್ಬರ ದೇಹ ಹಾಗೂ ಜೀರ್ಣಕ್ರಿಯೆ ವಿಭಿನ್ನವಾಗಿರುವುದರಿಂದ ಸಿರಿಧಾನ್ಯಗಳನ್ನು ಸೇವಿಸುವಾಗ ಜಾಗರೂಕರಾಗಿರಬೇಕು.
ಸಿರಿಧಾನ್ಯಗಳನ್ನು ನಮ್ಮ ಆಹಾರದಲ್ಲಿ ಬಳಸುವ ಮೊದಲು ನಮ್ಮ ದೇಹದ ಸ್ಥಿತಿಗತಿಗಳನ್ನು ಗಮನಿಸಿಕೊಂಡು ನಾವು ಸಿರಿಧಾನ್ಯಗಳನ್ನು ಸೇವಿಸಬೇಕಾಗುತ್ತದೆ ಎಂದು ಕಾಕುಂಜೆ ಆಯುರ್ವೇದಿಕ್ ವೆಲ್ನೆಸ್ ಕ್ಲಿನಿಕ್ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.
ಎಲ್ಲಾ ಸಿರಿಧಾನ್ಯಗಳಲ್ಲಿರಿವ ಒಂದು ಸಾಮಾನ್ಯ ಅಂಶವೆಂದರೆ ಅದು ಕಡಿಮೆ ಪ್ರಮಾಣದ ಕಾಬ್ರ್ರೋಹೈಡ್ರೇಟ್ ಗಳನ್ನು ಹೊಂದಿರುವ ಕಾರಣ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸಮತೋಲನ ಗೊಳಿಸುತ್ತದೆ. ಥೈರಾಯಿಡ್ ಇರುವವರಿಗೆ ಈ ಸಿರಿಧಾನ್ಯಗಳು ಬಹಳ ಉಪಕಾರಿ.
ಈ ಸಿರಿಧಾನ್ಯಗಳು ತುಂಬಾ ನಿಧಾನವಾಗಿ ಜೀರ್ಣಗೊಳ್ಳುವುದರಿಂದ ಹೊಟ್ಟೆ ಸಮಸ್ಯೆ ಇರುವವರು ಸಿರಿಧಾನ್ಯಗಳನ್ನು ಬಹಳ ಜಾಗರೂಕತೆಯಿಂದ ಸೇವಿಸಿಬೇಕಾಗುತ್ತದೆ. ಆಯುರ್ವೇದದಲ್ಲಿ ವಾತವನ್ನು ಜಾಸ್ತಿ ಮಾಡುವ ಗುಣ ಈ ಸಿರಿಧಾನ್ಯಗಳಗೆ ಇದೆ. ಹಾಗಾಗಿ ನಾವು ಸೇವಿಸುವ ಮುಂಚೆ ಸಿರಿ ಧಾನ್ಯಗಳನ್ನು 8 ಗಂಟೆಗಳ ಕಾಲ ನೆನೆಸಿ, ಸ್ವಲ್ಪ ತುಪ್ಪ ಅಥವಾ ಎಣ್ಣೆಯನ್ನು ಬೆರೆಸಿ ಸೇವಿಸುವುದು ಉತ್ತಮ.
ನಮ್ಮ ಜೀರ್ಣಕ್ರಿಯೆ ಸರಿ ಇದೆ ಎಂದಾದಲ್ಲಿ ಮಾತ್ರವೇ ತುಪ್ಪ, ಎಣ್ಣೆಯ ಜೊತೆ ಉಪಯೋಗಿಸುವುದು ಉತ್ತಮ. ಜೀರ್ಣಕ್ರಿಯೆ ಸರಿ ಇಲ್ಲವಾದಲ್ಲಿ ಅದನ್ನು ಸರಿಪಡಿಸಿಕೊಂಡು ತುಪ್ಪ ಹಾಗೂ ಎಣ್ಣೆಯನ್ನು ಬಳಸುವುದು ಒಳ್ಳೆಯದು.
ನಮ್ಮ ದೇಹದಲ್ಲಿ ಇರುವ ಸಕ್ಕರೆಯ ಅಂಶವನ್ನು ಹಾಗೂ ದೇಹದಲ್ಲಿರುವ ಕೊಬ್ಬಿನಂಶವನ್ನು ಕಡಿಮೆಗೊಳಿಸಲು ಬಹಳ ಸಹಕಾರಿಯಾಗಿದೆ.