ಸುಳ್ಯ: ಹೆಬ್ಬಾವಿನೊಂದಿಗೆ ಕದನಕ್ಕೆ ಇಳಿದ ಕಾಳಿಂಗ ಸರ್ಪವೊಂದು ಹೆಬ್ಬಾವನ್ನೆ ನುಂಗಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಪಾಲಡ್ಕದಲ್ಲಿ ನಡೆದಿದೆ.
ಮೆರಿನ್ ಇಂಜಿನಿಯರ್ ಆಗಿರುವ ಗಿರೀಶ್ ಪಾಲಡ್ಕ ಅವರು ಏ.3ರಂದು ಸಂಜೆ ತೋಟಕ್ಕೆ ಹೋದ ಸಂದರ್ಭ ಕಾಳಿಂಗ ಹಾವು ಹೆಬ್ಬಾವನ್ನು ನುಂಗುವ ದೃಶ್ಯ ಕಂಡುಬಂದಿದೆ.
ಸುಮಾರು ಅರ್ಧ ಗಂಟೆಗಳ ಕಾಲ ಕಾಳಿಂಗ ಹಾಗೂ ಹೆಬ್ಬಾವಿನ ನಡುವೆ ಕದನ ನಡೆದಿದ್ದು, ಎರಡೂ ಸರ್ಪಗಳು ಪರಸ್ಪರ ಫೈಟ್ ಮಾಡಿವೆ. ಹೆಬ್ಬಾವು ಪ್ರಾಣ ರಕ್ಷಣೆ ಮಾಡಿಕೊಳ್ಳಲು ಹೋರಾಡಿದರೆ ಹೆಬ್ಬಾವನ್ನೆ ಕಾಳಿಂಗ ಸರ್ಪ ಅರ್ಧ ನುಂಗಿದೆ. ಈ ದೃಶ್ಯವನ್ನು ಗಿರೀಶ್ ಪಾಲಡ್ಕ ಅವರು ತನ್ನ ಮೊಬೈಲ್ ಕ್ಯಾಮೆರದಲ್ಲಿ ಸೆರೆಹಿಡಿದ್ದಾರೆ.