ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೇ 2ರಂದು ಮುಂಗಾರು ಪೂರ್ವ ನಿರ್ವಹಣೆಗಾಗಿ ಬಂದ್ ಆಗಲಿದೆ. ಎರಡೂ ರನ್ವೇಗಳನ್ನು ದುರಸ್ತಿಗಾಗಿ ಮುಚ್ಚಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ.
ಬೆಳಗ್ಗೆ 11ರಿಂದ ಸಾಯಂಕಾಲ 5ರವರೆಗೆ ರನ್ವೇ ಕಾರ್ಯನಿರ್ವಹಿಸುವುದಿಲ್ಲ. ನಿಗದಿತ ದುರಸ್ತಿ ಕಾರ್ಯಕ್ಕಾಗಿ ರನ್ ವೇ ಮುಚ್ಚಲಾಗುವುದು ಎಂದು ವಿಮಾನ ನಿಲ್ದಾಣ ಸಂಸ್ಥೆ ಹೇಳಿದೆ. ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣ ಜಗತ್ತಿನ ಅತಿನಿಬಿಡ ಸಿಂಗಲ್ ರನ್ ವೇ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು ದಿನಂಪ್ರತಿ 900 ವಿಮಾನಗಳು ಹಾರಾಟ ನಡೆಸುತ್ತವೆ.
ವಿಮಾನ ನಿಲ್ದಾಣವು ರನ್ವೇಗಳು, ಟ್ಯಾಕ್ಸಿವೇ ಜಾಲವನ್ನು ಹೊಂದಿದ್ದು, ಸುಮಾರು 1,033 ಎಕರೆ ಪ್ರದೇಶ ಒಳಗೊಂಡಿದೆ.