ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಅಸೋಸಿಯೇಷನ್ ನ ವತಿಯಿಂದ ಪ್ಲೆಸ್ಮೆಂಟ್ ಅಂಡ್ ಕೆರಿಯರ್ ಗೈಡೆನ್ಸ್ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್ ಎಂ.ಎಂ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ಧವಕುಮಾರ್ ನಿರ್ದೆಶಕರು, ಬಿಸಿನೆಸ್ ದೆವಲಪ್ ಮೆಂಟ್, ಸುರಕ್ಷಾ ಕೆರಿಯರ್ ಅಕಾಡೆಮಿ ಬೆಂಗಳೂರು ಹಾಗೂ ಮಧುಸೂದನ್.ಸಿ.ಎಸ್, ನಿರ್ದೆಶಕರು ಟ್ರೈನಿಂಗ್ ಸುರಕ್ಷಾ ಕೆರಿಯರ್ ಅಕಾಡೆಮಿ ಬೆಂಗಳೂರು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಧಿಕಾರಿಯಾಗಿರುವ ಶ್ರೀಮತಿ ರತ್ನಾವತಿ ಡಿ ಉಪಸ್ಥಿತರಿದ್ದರು.
ಅಸೋಷಿಯೆಷನ್ ಸಂಚಾಲಕಿ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ದಿವ್ಯ.ಟಿ.ಎಸ್ , ಶ್ರೀಧರ್.ವಿ ಹಾಗೂ ಶ್ರೀಮತಿ ಗೀತಾ ಶೆಣ್ಯೆ ಮತ್ತು ಅಸೋಸಿಯೇಷನ್ ನ ವಿದ್ಯಾರ್ಥಿ ಪ್ರತಿನಿಧಿಗಳಾದ ಅನಘ ಹಾಗೂ ಶ್ರೀವತ್ಸ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅನಘ ಮತ್ತು ವಿಸ್ಮಿತಾ ಪ್ರರ್ಥಿಸಿದರು, ಅನಘ ಎಲ್ಲರನ್ನು ಸ್ವಾಗತಿಸಿ, ರಜತ್ ಕುಮಾರ್ ವಂದಿಸಿದರು ಹಾಗೂ ಶಾನ್ಯ.ಪಿ ಕಾರ್ಯಕ್ರಮ ನಿರೂಪಿಸಿದರು.