News Karnataka Kannada
Sunday, May 05 2024
ಮಂಗಳೂರು

ಉದ್ಯೋಗ ಮತ್ತು‌ ಶಿಕ್ಷಣದಿಂದ ವಂಚಿತ ಮಾಡುವುದೇ ಅಗ್ನಿಪಥ್ ಯೋಜನೆ: ಯು.ಟಿ. ಖಾದರ್‌

Nothing wrong in students cleaning toilets: UT Khader
Photo Credit :

ಮಂಗಳೂರು: ‘ಅಗ್ನಿಪಥ’ ಯುವಜನರ ದಾರಿ ತಪ್ಪಿಸಿ ಅವರನ್ನು ಉದ್ಯೋಗ ಮತ್ತು ಶಿಕ್ಷಣದಿಂದ ವಂಚಿತರನ್ನಾಗಿಸುವ ಯೋಜನೆಯಾಗಿದೆ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್‌ ವಾಗ್ದಾಳಿ ನಡೆಸಿದ್ದಾರೆ.

ಹುತಾತ್ಮ ಸೈನಿಕರನ್ನು ಮುಂದಿಟ್ಟುಕೊಂಡು ಬಿ.ಜೆ.ಪಿ ಅಧಿಕಾರಕ್ಕೆ ಬರುತ್ತೆ. ಆದ್ರೆ ಸೇನೆಯಲ್ಲಿ ದುಡಿಯುವವರಿಗೆ ಸವಲತ್ತು ಕೊಡುವ ಯೋಗ್ಯತೆ ಇಲ್ವಾ..?.  ದೇಶದ ಗಡಿಯಲ್ಲಿ ಬಂದೂಕು ಪಿರಂಗಿ ಹಿಡಿದು ಶತ್ರು ದೇಶದ ಮೇಲೆ ಹೋರಾಟ ಮಾಡುವವರು ಸೈನಿಕರು ಆದ್ರೆ ಸೇನೆಗೆ ಸೇರುವ ಯುವಕರ ಮೇಲೆಯೇ ಭಾರತ ಸರ್ಕಾರ ಪಿರಂಗಿ ಬಂದೂಕು ಬಿಡುತ್ತಿದೆ ಎಂದರು.

ಸರಕಾರ ಸೈನ್ಯಕ್ಕೆ ನೇರ ನೇಮಕಾತಿಯನ್ನು ರದ್ದುಪಡಿಸಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಮುಂದಾಗಿದೆ. ಈ ಮೂಲಕ ಸೇನೆಯ ನೇಮಕಾತಿಯನ್ನು ಕೂಡ ಖಾಸಗಿಯವರ ಕೈಗೆ ನೀಡಲು ಹೊರಟಿದೆ. ಕೂಡಲೇ ಈ ಯೋಜನೆಯನ್ನು ವಾಪಸ್‌ ಪಡೆಯಬೇಕು ಎಂದು ರವಿವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಯಾವ ಧರ್ಮದ ನಿಂದನೆ ಮಾಡಿದ್ರು ಕಾಂಗ್ರೆಸ್ ಅದನ್ನು ಒಪ್ಪಲ್ಲ,ಯಾರು ಯಾರ ಧರ್ಮದ ನಿಂದನೆಯನ್ನು ಮಾಡಬಾರದು ಕಾಂಗ್ರೆಸ್ ಇದನ್ನು ಖಂಡಿಸುತ್ತದೆ. ಯಾರ ವೈಯಕ್ತಿಕ ನಿಂದನೆಗು ಕಾಂಗ್ರೆಸ್ ಅವಕಾಶ ನೀಡಲ್ಲ, ಕ್ಲಬ್ ಹೌಸ್ ನ ಚರ್ಚೆ ಮಾಡುವುದಕ್ಕೆ ಬೇರೆ ಸಾಕಷ್ಟು ಕೆಲಸವಿದೆ ಜಿಲ್ಲಾಧ್ಯಕ್ಷರು ನಿನ್ನೆ ಈ ಬಗ್ಗೆ ‌ಮಾಹಿತಿ‌ ಪಡೆದಿದ್ದಾರೆ ರಾಜ್ಯ ನಾಯಕರ ಗಮನಕ್ಕೆ ತರಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಮಾತನಾಡಿ ಯೋಜನೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಮುಂದಿನ ವಾರ ಸತ್ಯಾಗ್ರಹ ನಡೆಸಲಾಗುವುದು ಎಂದರು. ಮುಖಂಡರಾದ ಸಂತೋಷ್‌ ಕುಮಾರ್‌ ಶೆಟ್ಟಿ, ಟಿ.ಕೆ. ಸುಧೀರ್‌, ಅಪ್ಪಿ, ಜೇಮ್ಸ್‌ ಪ್ರವೀಣ್‌, ಫ‌ಯಾಜ್‌ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು