ಮಂಗಳೂರು: ಶ್ರೀ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಮಂಗಳೂರು. ಇದರ26ನೇ ವಾರ್ಷಿಕ ಮಹಾಸಭೆಯು ಸೆ. .17- ರಂದು ಮೋರ್ಗನ್ಸ್ಗೇಟ್, ಜೆಪ್ಪು ರಾಮಕ್ಷತ್ರಿಯ ಮಂದಿರದಲ್ಲಿ ಸಂಘದಅಧ್ಯಕ್ಷರಾದ ಜೆ.ಕೃಷ್ಣ ಪಾಲೇಮಾರ್ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ ಉಪಾಧ್ಯಕ್ಷರಾದ .ಕೆ. ದಿನೇಶ್ರಾವ್ ಸದಸ್ಯರನ್ನು ಸಭೆಗೆ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ .ಶಿವಪ್ರಸಾದ್ ಪಿ.ಎ ಇವರು ಕಳೆದ ವರ್ಷದ ಮಹಾಸಭೆಯ ನಡವಳಿಕೆ, 2022-2023ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ ಹಾಗೂ ಸಮಜಾಯಿಶಿಕಾ ವರದಿ, ಅಂದಾಜು ಬಜೆಟಿಗಿಂತ ಹೆಚ್ಚಾದ ಬಾಬ್ತುಗಳು ಹಾಗೂ 2022-2023 ನೇ ಸಾಲಿನ ಅಂದಾಜುಆಯವ್ಯಯ ಪಟ್ಟಿಯನ್ನು ಮತ್ತು ನಿವ್ವಳ ಲಾಭ ವಿಂಗಡಣೆ ಮಂಡಿಸಿ ಸಭೆಯಅನುಮೋದನೆಯನ್ನು ಪಡೆದರು.
ನಿರ್ದೇಶಕರುಗಳಾದ ಸರ್ವಶ್ರೀಗಳಾದ ರಾಮಚಂದ್ರಕೆ.ಎಸ್, .ಜೆ .ಕೆ ರಾವ್, .ಪಿ ಬಾಬು, .ರಂಜನ್ ಕೆ ಎಸ್, ಡಾ.ಜೆರವೀಂದ್ರ, ಡಾ.ಪ್ರಭಾಕರ್ ಹೆಚ್, ಪಿ ಬಾಬು, ವಾರಿಜ,ಡಾ ಮಂಜುಳಾ ಎ ರಾವ್ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಜೆ ಕೃಷ್ಣ ಪಾಲೇಮಾರ್ರವರು ಸಂಘವು 2022-2023 ನೇ ಸಾಲಿನಲ್ಲಿ3,235 ಸದಸ್ಯರನ್ನು ಹೊಂದಿದ್ದುರೂ. 92,50,58,968-00 ದುಡಿಮೆ ಬಂಡವಾಳದಿಂದ ರೂ.416,98,90,105-00 ವ್ಯವಹಾರ ನೆಡೆಸಿ 105.2 ಲಕ್ಷ ನಿವ್ವಳ ಲಾಭಗಳಿಸಿರುವುದನ್ನು ಸಭೆಗೆ ತಿಳಿಸಿದರು.
ಮತ್ತು2022-2023 ನೇ ಸಾಲಿಗೆ ಶೇ.16 ಡಿವಿಡೆಂಟ್ ಘೋಷಿಸಿದರು. ಹಾಗೂ ಸಂಘವು 26 ವರ್ಷಗಳಲ್ಲಿ ಉತ್ತಮ ಪ್ರಗತಿಹೊಂದಿದ್ದು ಶೇ. 97.97 ಸಾಲ ವಸೂಲಾತಿಯಾಗಿದ್ದು ಸಂಘದಲ್ಲಿಉಚಿತಆರ್.ಟಿ.ಜಿ.ಎಸ್,ಇ-ಸ್ಟಾಪಿಂಗ್ ಸೌಲಭ್ಯವನ್ನು ನೀಡುತ್ತಿದ್ದು, ಸದಸ್ಯರಿಗಾಗಿಉಚಿತಕಣಿನ ಶಸ್ತ್ರಚಿಕ್ಸಿತೆ, ಕನ್ನಡಕ ವಿತರಣೆ ಮಾಡುತ್ತಿದ್ದು ಹಾಗೂ ಸಂಘದಅಭಿವೃದ್ದಿಗೆ ಸಹಕರಿಸಿದ ಎಲ್ಲಾಸದಸ್ಯರಿಗೆ ಅಭಿನಂದಿಸುತ್ತಾ ಪ್ರಸುತ್ತವರ್ಷದಲ್ಲಿ ಸುಮಾರು 8 ಕೋಟಿ ಮೌಲ್ಯದ ಸಂಘದ ನೂತನ ಆಡಳಿತ ಕಛೇರಿಯನ್ನುತೆರೆದು ಕಾರ್ಯ ನಿರ್ವಹಿಸುತ್ತಿದ್ದು ಇನ್ನು 5 ಹೊಸ ಶಾಖೆಗಳನ್ನು ತೆರೆಯಲು ಕಾರ್ಯಪ್ರವರ್ತರಾಗಿದ್ದು ಮುಂದೆಯೂಇದೇರೀತಿ ಸಹಕಾರ ನೀಡುವಂತೆ ವಿನಂತಿಸಿಕೊಂಡರು.
ಕುಮಾರಿ ಪೃಥ್ವಿ ಪ್ರಾರ್ಥನೆಯೊಂದಿಗೆಕಾರ್ಯಕ್ರಮ ಪ್ರಾರಂಭಗೊಂಡು ಕೊನೆಯಲ್ಲಿ ನಿರ್ದೇಶಕರಾದ. ರವೀಂದ್ರ ಕೆ ರವರು ವಂದಿಸಿದರು.