ಮಂಗಳೂರು: ಸಾಮಾಜಿಕ ಹೋರಾಟಗಾರ, ವಿಚಾರವಾದಿ ಸಂಘಟನೆಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ಗೆ ಪೊಲೀಸ್ ಇಲಾಖೆಯಿಂದ ನೀಡಲಾಗಿದ್ದ ಭದ್ರತೆ ಹಿಂಪಡೆಯಲಾಗಿದೆ.
ನಾಯಕ್ ಅವರಿಗೆ ಬೆದರಿಕೆ ಕರೆಗಳು ಬಂದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಏಳು ವರ್ಷಗಳಿಂದ ರಾತ್ರಿ ಹಗಲು ಇಬ್ಬರು ಅಂಗರಕ್ಷಕರ ಭದ್ರತೆ ಒದಗಿಸಲಾಗಿತ್ತು. ಅಂಗರಕ್ಷಕರ ಮುಂಗಡ ಪಾವತಿಸಲು ಮಾ.4ರಂದು ಡಿಸಿಪಿ ಪತ್ರ ಬರೆದಿದ್ದರು. ಮುಂಗಡ ಪಾವತಿ ಸಾಧ್ಯವಿಲ್ಲ ಎಂದು ನರೇಂದ್ರ ನಾಯಕ್ ತಿಳಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಮಾ.29ರ ರಾತ್ರಿಯಿಂದ ಭದ್ರತೆ ವಾಪಸ್ ಪಡೆಯಲಾಗಿದೆ.