ಅಮೆರಿಕ: ಉಡುಪಿ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು ಅಮೆರಿಕಾದ ಶಿಕಾಗೋ ನಗರದಲ್ಲಿ, ಶ್ರೀ ಪುತ್ತಿಗೆ ಮಠದ ಹನ್ನೊಂದನೇ ಶಾಖೆ ಶ್ರೀ ಕೃಷ್ಣವೃಂದಾವನ ಉದ್ಘಾಟಿಸಿದರು.
ಶಿಕಾಗೋ ನಗರದ ನೂರಾರು ಭಕ್ತರು ಉಪಸ್ಥಿತರಿದ್ದು, ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು. ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾದ ಸೌಕರ್ಯಗಳ್ಳನ್ನು ನಗರದ ಭಕ್ತರ ಸಹಕಾರದಿಂದ ಒದಗಿಸಿ, ನಿತ್ಯ ಧಾರ್ಮಿಕ ಕಾರ್ಯಗಳಿಗೆ ನಗರದ ಭಕ್ತರಿಗೆ ಉಪಯೋಗಿಸಿಕೊಳ್ಳಲು ಶ್ರೀಪಾದರು ಸೂಚಿಸಿದರು.
ಏಪ್ರಿಲ್ ಮೂರರಂದು ಶ್ರೀ ಕೃಷ್ಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದ್ದು, ಈ ಪ್ರಯುಕ್ತ ಏಪ್ರಿಲ್ ಎರಡರಂದು ಶಿಕಾಗೋ ಭಕ್ತರು ಉಡುಪಿಯ ಶ್ರೀ ಕೃಷ್ಣ ಮುಖ್ಯಪ್ರಾಣರನ್ನು ಹಾಗೂ ರಾಘವೇಂದ್ರ ಸ್ವಾಮಿಗಳ ವೃಂದಾವನವನ್ನು ವೈಭವದಿಂದ “ಸ್ವಾಗತಂ ಕೃಷ್ಣ”ಎಂಬ ಕಾರ್ಯಕ್ರಮದೊಂದಿಗೆ ಸ್ವಾಗತಿಸುತ್ತಿದ್ದಾರೆ.