ಪುತ್ತೂರು: ಬೆಂಗಳೂರು ಅರಮನೆ ಮೈದಾನದಲ್ಲಿ ನವಂಬರ್ 25 ಮತ್ತು 26 ರಂದು ತುಳುನಾಡಿನ ಕಂಬಳ ನಡೆಯಲಿದ್ದು, ಈ ಕಂಬಳಕ್ಕೆ ಉಪ್ಪಿನಂಗಡಿಯಿಂದ ಬೆಂಗಳೂರು ಕಂಬಳ ಕೋಣಗಳು ಹಾಗೂ ಅದರ ಮಾಲಕರು ಮತ್ತು ಪರಿಚಾರಕರ ದಂಡು ಹೊರಟಿದೆ.
ಉಪ್ಪಿನಂಗಡಿ ಪದವಿ ಕಾಲೇಜು ಮೈದಾನದಲ್ಲಿ ಸೇರಿದ ಕೋಣಗಳು, ತುಳುನಾಡಿದ ಧ್ವಜ ನಿಶಾನೆ ತೋರಿದ ಬಳಿಕ ಹೊರಟಿದೆ. ಉಪ್ಪಿನಂಗಡಿ-ಶಿರಾಡಿಘಾಟ್ ಮಾರ್ಗವಾಗಿ ಬೆಂಗಳೂರು ತಲುಪಲಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ಹಾಸನ ತಲುಪಿ ಅಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಕೋಣಗಳಿಗೆ ವಿಶ್ರಾಂತಿ ಮಾಡಿ ಬಳಿಕ ಹಾಸನ- ಚನ್ನಪಟ್ಟಣ ಮಾರ್ಗವಾಗಿ ಬೆಂಗಳೂರು ಅರಮನೆ ಮೈದಾನಕ್ಕೆ ಕೋಣಗಳ ತಂಡ ತಲುಪಲಿದೆ. ರಾತ್ರಿ ಸುಮಾರು 11 ಗಂಟೆಗೆ ಕೋಣಗಳು ತಲುಪುವ ನಿರೀಕ್ಷೆ ಇದೆ.
ಕಂಬಳದಲ್ಲಿ ಪಾಲ್ಗೊಳ್ಳುವ ಎಲ್ಲಾ ಕೋಣಗಳಿಗೆ ಪಶುಸಂಗೋಪನಾ ಇಲಾಖೆ ವೈದ್ಯರು ದೃಢೀಕರಣ ಪತ್ರ ನೀಡಿದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಈ ಬೆಂಗಳೂರು ಕಂಬಳ ನಡೆಯಲಿದೆ.