ಪುತ್ತೂರು: ಚುನಾವಣಾ ಸಂಧರ್ಭದಲ್ಲಿ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದು ಮಾಮೂಲಿಯಾಗಿದೆ. ಆದರೆ ಈಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯ ವೈಖರಿ ಜನರಿಗೆ ಬೇಸತ್ತು ಹೋಗಿದೆ. ಕುಮಾರ ಸ್ವಾಮಿಯ ಪಂಚರತ್ನ ಯೋಜನೆ ಜನರಿಗೆ ಭರವಸೆ ಮೂಡಿದೆ ಇದರಿಂದಾಗಿ ಬೇರೆ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಒಲವು ತೋರಿದ್ದಾರೆ.
ಈ ಹಿನ್ನೆಲೆ ಇಂದು ಪುತ್ತೂರು ಜೆಡಿಎಸ್ ವಿಧಾನಸಭಾ ಚುನಾವಣಾ ಕಚೇರಿಯಲ್ಲಿ ಕೆಮ್ಮಾಯಿಯ ಕಾಂಗ್ರೆಸ್ ಕಾರ್ಯಕರ್ತರಾದ ಅರ್ಷದ್ ಹಾಗೂ ಅಷ್ಪಕ್ ಜೆಡಿಎಸ್ ಮುಖಂಡರಾದ ಕೈಲಾಶ್ ಗೌಡ , ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ, ಪ್ರಭಾಕರ್ ಸಾಲ್ಯಾನ್, ಮಹಾವೀರ ಜೈನ್, ಶರೀಫ್ ಸಾರಪುಣಿ, ಅಬ್ದುಲ್ ಕುಂಞಿ, ಪ್ರಿಯ ಸಾಲಿಯಾನ್ ಮತ್ತಿತರ ಉಪಸ್ಥಿತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.