ಮಂಗಳೂರು: ಕಾಸರಗೋಡಿನ ರಾಷ್ಟ್ರೀಯ ಸ್ಚಯಂ ಸೇವಕ ಸಂಘದ ಮುಖಂಡ ಹುಬ್ಬಳ್ಳಿ ರಮೇಶ್ ಮೇಲೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿತ ಹಿಂದೂ ಕಾರ್ಯಕರ್ತರು ತಿರುಗಿ ಬಿದ್ದ ಘಟನೆ ಪುತ್ತೂರು ಸಮುದಾಯ ಭವನ ಮತಗಟ್ಟೆಯ ಬಳಿ ನಡೆದಿದೆ.
ಬಿಜೆಪಿ ಪಕ್ಷದ ಟೆಂಟ್ ಗೆ ಆಗಮಿಸಿದ್ದ ಸ್ಚಯಂ ಸೇವಕ ಸಂಘದ ಮುಖಂಡ ಹುಬ್ಬಳ್ಳಿ ರಮೇಶ್ ಭೇಟಿಗೆಅರುಣ್ ಪುತ್ತಿಲ ಪರ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆ ಮಾತಿನ ಚಕಮಕಿ ನಡೆದಿದೆ. ಈ ಗುಂಪು ಚದುರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.