ನ್ಯೂಸ್ ಕರ್ನಾಟಕ ವತಿಯಿಂದ ‘ಆಷಾಡ ಮಿನದನ’ ಎಂಬ ಆಟಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಕಾರ್ತೆಲ್ ತಿಂಗಳು ಕಳೆದು ನಾವು ಕಾಲಿಡುವುದೇ ಆಟಿ ತಿಂಗಳಿಗೆ. ಸೌರಮಾನ ಪದ್ಧತಿಯ ನಾಲ್ಕನೇ ಮಾಸ ಆಟಿ ತಿಂಗಳು. ಹೆಚ್ಚಿನ ರೋಗರುಜಿನಗಳು ಬಾಧಿಸುವ ತಿಂಗಳು ಇದೆಂದು ತುಳುಜನರ ನಂಬಿಕೆ. ಈ ತಿಂಗಳಲ್ಲಿ ಎಲ್ಲೆಲ್ಲೂ ಬಡತನ. ಯಾವುದೇ ಬೆಳೆಗಳನ್ನು ಬೆಳೆಯಲಾಗದ ಮಾಸವಿದು.
ಈ ಸಂದರ್ಭದಲ್ಲಿ ಮಾನವ ಮತ್ತು ಪ್ರಕೃತಿಯ ಅವಿನಾಭಾವ ಸಂಬಂಧ ಮನೆ ಮಾಡುತ್ತದೆ. ಎಲ್ಲೆಡೆಯಲ್ಲಿ ಪಸರಿಸಿರುವ ಕೆಸುವಿನ ಎಲೆಯನ್ನು ಸುರುಳಿಯಾಗಿ ಮಡಿಸಿ ಗಂಟು ಹಾಕಿ ಮಾಡುವ ಪದಾರ್ಥ ತೇಟ್ಲ, ಪತ್ರೊಡೆ. ನುಗ್ಗೆ ಸೊಪ್ಪಿನ ಜೊತೆ ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಹಲಸಿನ ಬೀಜ ಸೇರಿಸಿ ಪಲ್ಯ. ತಿಮರೆ ಚಟ್ನಿ, ತಜಂಕ್ ಪಲ್ಯ, ಕಿರಾತ ಕಡ್ಡಿ ಕಷಾಯ, ಮಾವಿನಕಾಯಿ ಗೊಜ್ಜು ಪಲ್ಯ, ಹಲಸಿನ ಸೊಳೆ (ಉಪ್ಪಡ್ ಪಚ್ಚಿಲ್), ಉಪ್ಪಿನಕಾಯಿ, ಕಣಿಲೆ (ಎಳೆ ಬಿದಿರು)ಪಲ್ಯ. ವಿವಿಧ ಬಗೆಯ ಹಪ್ಪಳಗಳು, ಹುರಿದ ಹುಣಸೆ ಬೀಜ, ಮೆತ್ತೆಗಂಜಿ, ಒಲ್ಲೆಕೊಡಿ ಕಷಾಯಗಳು ತುಳುಜನರ ಹಸಿವಿಗಾಗುವ ಅಮೃತಗಳು. ಇದು ಹಿಂದಿನ ಕಾಲದಲ್ಲಿ ಇದ್ದ ಜೀವನ ಪದ್ದತಿ.
ಆದ್ರೆ ಈ ಎಲ್ಲದರ ಹೊರತಾಗಿ ಇಂದಿನ ಜೀವನ ಪದ್ದತಿಯಲ್ಲಿ ಈ ಬಾರಿ ವಿಶೇಷ ರೀತಿಯಲ್ಲಿ ಆಟಿಯನ್ನು ನೀವು ಹೇಗೆ ಆಚರಿಸ್ತೀರಿ ಅನ್ನೋದನ್ನು ನಮಗೆ ತಿಳಿಸಿ, ನಿಮ್ಮ ಕ್ರಿಯಾತ್ಮಕ ಚಟುವಟಿಕೆಗೆ ವೇದಿಕೆ ಕಲ್ಪಿಸಲಿದೆ ‘ ನ್ಯೂಸ್ ಕರ್ನಾಟಕ’. ನಮ್ಮ ನಿಮ್ಮ ಜಂಟಿ ಆಶ್ರಯದಲ್ಲಿ ಈ ಬಾರಿ ಆಟಿ ಆಚರಣೆಯಾಗಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ + 91 76762 18092.