ಉಡುಪಿ: ಆಷಾಢ ಶುದ್ಧ ಏಕಾದಶಿಯಂದು ಆಚರಿಸಲ್ಪಡುವ ತಪ್ತಮುದ್ರಾಧಾರಣೆಯ ಪ್ರಯುಕ್ತ ಪಲಿಮಾರು ಮಠದ ಹಿರಿಯ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಕಿರಿಯ ವಿದ್ಯಾರಾಜೇಶ್ವರ ತೀರ್ಥರು ಬೆಂಗಳೂರು ಮಹಾನಗರದಲ್ಲಿ ಮತ್ತು ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಭಕ್ತರಿಗೆ ಮುದ್ರಾಧಾರಣೆಯನ್ನು ಮಾಡಿದರು.
ನೂರಾರು ಭಕ್ತರು ಬೆಳಗ್ಗೆಯಿಂದಲೇ ಮಠಕ್ಕೆ ಆಗಮಿಸಿ, ಉಭಯ ಸ್ವಾಮೀಜಿಗಳಿಂದ ಮುದ್ರಾಧಾರಣೆ ಹಾಕಿಸಿಕೊಂಡರು. ಮುದ್ರಾಧಾರಣೆಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.