ಸುಳ್ಯ: ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸರಿಯಾಗಿಲ್ಲ. ನಂದಕುಮಾರ್ ಅವರಿಗೆ ಬಿ ಪಾರ್ಮ್ ನೀಡಬೇಕು ಎಂದು ಅವರ ಬೆಂಬಲಿಗರು ಆಯ್ಕೆ ಪ್ರಕ್ರಿಯೆಗೆಂದು ಆಗಮಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಎಂಎಲ್ ಸಿ ಮಂಜುನಾಥ್ ಭಂಡಾರಿ ಮತ್ತು ಮಾಜಿ ಸಚಿವ ರಮಾನಾಥ್ ರೈ ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮುಂದೆ ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ಸುಮಾರು ೫೦೦ ಕ್ಕೂ ಅಧಿಕ ಮಂದಿ ಆಕ್ರೋಶ ಹೊರ ಹಾಕಿದ್ದು, ಬಹುತೇಕರು ನಂದಕುಮಾರ್ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಕಗ್ಗಂಟು ಉಂಟಾಗಿದ್ದು, ಡಿಕೆ ಶಿವಕುಮಾರ್ ನಿನ್ನೆ ಬೆಂಗಳೂರಿನಲ್ಲಿ ಸುಳ್ಯದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ತಿಳಿಸಿದ್ದರು.
ಅದರಂತೆ ಇಂದು ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ ನಾಯಕರಿಗೆ ಇಂದು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಸಿಕ್ಕಿದೆ. ಏಕಾ ಏಕಿ ಕಚೇರಿಯ ಒಳ ಕೋಣೆಗೆ ನುಗ್ಗಿದ ಕಾರ್ಯಕರ್ತರು ಆಕ್ರೋಶ ಭರಿತರಾಗಿ ಅಭಿಪ್ರಾಯ ಹಂಚಿಕೆ ಮಾಡಿದ್ದಾರೆ.
ಈ ಸಂದರ್ಭ ಪ್ರಮುಖರಾದ ಬ್ಲಾಕ್ ಅಧ್ಯಕ್ಷ. ಪಿ ಸಿ ಜಯರಾಮ, ಭರತ್ ಮುಂಡೋಡಿ, ಪಿ.ಎಸ್ ಗಂಗಾಧರ , ಪಿ ಎಸ್ ಗಂಗಾಧರ್ ಸೇರಿದಂತೆ ಹಲವು ನಾಯಕರಿದ್ದರು.