ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಂಬೆಟ್ಟು ಪರಿಸರಕ್ಕೆ ಶನಿವಾರ ತಡರಾತ್ರಿ ಲಗ್ಗೆ ಇಟ್ಟ ಒಂಟಿ ಸಲಗ ಸ್ಥಳೀಯ ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡಿದೆ. ಕಾಡಿನoಚಿನ ಸುಧಾಕರ ಗೌಡ,ವಿಶ್ವನಾಥ ಗೌಡ, ರುಕ್ಮಯ್ಯ ಗೌಡ, ಜಯಪ್ರಕಾಶ್ ಭಟ್, ಕೃಷ್ಣ ಭಟ್ ಮೊದಲಾದವರ ತೋಟಗಳಲ್ಲಿ 50 ಕ್ಕಿಂತ ಅಧಿಕ ಬಾಳೆಗಿಡ, ಅಡಕೆ ಗಿಡಗಳನ್ನು ಪುಡಿಗೈದಿದೆ.
ನೀರಾವರಿ ವ್ಯವಸ್ಥೆಯ ಪೈಪ್ ಲೈನ್ ಹಾಳುಗೆಡವಿದೆ. ಪರಿಸರದ ಮನೆಗಳ ಹತ್ತಿರದವರೆಗೂ ಒಂಟಿ ಸಲಗ ಓಡಾಟ ನಡೆಸಿದೆ.
ಕಂದಕದ ಮೂಲಕವೇ ಪ್ರವೇಶ.
ಚಾಮುಂಡಿ ನಗರ, ಕಜೆ ನಳಿಲು ಪರಿಸರಗಳ ಮೂಲಕ ಆಗಮಿಸಿದ ಒಂಟಿ ಸಲಗ ದುಂಬೆಟ್ಟು ಬಳಿ ಇರುವ ಆನೆ ಕಂದಕವನ್ನು ಜರಿದು ಹಾಕಿ ಅದರ ಮೂಲಕವೇ ಪರಿಸರಕ್ಕೆ ನುಗ್ಗಿದೆ. ಕಳೆದ ಮೂರು ತಿಂಗಳಿನಿಂದ ಆನೆ ಹಾವಳಿ ಇಲ್ಲದೆ ನಿರಾಳರಾಗಿದ್ದ ದುಂಬೆಟ್ಟಿನ ಜನತೆಯಲ್ಲಿ ಮತ್ತೆ ಆತಂಕದ ವಾತಾವರಣ ಎದುರಾಗಿದೆ.