News Karnataka Kannada
Saturday, May 04 2024
ಮಂಗಳೂರು

ಮುಂಡಾಜೆ: ದುಂಬೆಟ್ಟು ಪರಿಸರಕ್ಕೆ ಲಗ್ಗೆ ಇಟ್ಟ ಒಂಟಿ ಸಲಗ

Huge damage to agriculture due to wild elephant attacks
Photo Credit : News Kannada

ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಂಬೆಟ್ಟು ಪರಿಸರಕ್ಕೆ ಶನಿವಾರ ತಡರಾತ್ರಿ ಲಗ್ಗೆ ಇಟ್ಟ ಒಂಟಿ ಸಲಗ ಸ್ಥಳೀಯ ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡಿದೆ. ಕಾಡಿನoಚಿನ ಸುಧಾಕರ ಗೌಡ,ವಿಶ್ವನಾಥ ಗೌಡ, ರುಕ್ಮಯ್ಯ ಗೌಡ, ಜಯಪ್ರಕಾಶ್ ಭಟ್, ಕೃಷ್ಣ ಭಟ್ ಮೊದಲಾದವರ ತೋಟಗಳಲ್ಲಿ 50 ಕ್ಕಿಂತ ಅಧಿಕ ಬಾಳೆಗಿಡ, ಅಡಕೆ ಗಿಡಗಳನ್ನು ಪುಡಿಗೈದಿದೆ.

ನೀರಾವರಿ ವ್ಯವಸ್ಥೆಯ ಪೈಪ್ ಲೈನ್ ಹಾಳುಗೆಡವಿದೆ. ಪರಿಸರದ ಮನೆಗಳ ಹತ್ತಿರದವರೆಗೂ ಒಂಟಿ ಸಲಗ ಓಡಾಟ ನಡೆಸಿದೆ.
ಕಂದಕದ ಮೂಲಕವೇ ಪ್ರವೇಶ.

ಚಾಮುಂಡಿ ನಗರ, ಕಜೆ ನಳಿಲು ಪರಿಸರಗಳ ಮೂಲಕ ಆಗಮಿಸಿದ ಒಂಟಿ ಸಲಗ ದುಂಬೆಟ್ಟು ಬಳಿ ಇರುವ ಆನೆ ಕಂದಕವನ್ನು ಜರಿದು ಹಾಕಿ ಅದರ ಮೂಲಕವೇ ಪರಿಸರಕ್ಕೆ ನುಗ್ಗಿದೆ. ಕಳೆದ ಮೂರು ತಿಂಗಳಿನಿಂದ ಆನೆ ಹಾವಳಿ ಇಲ್ಲದೆ ನಿರಾಳರಾಗಿದ್ದ ದುಂಬೆಟ್ಟಿನ ಜನತೆಯಲ್ಲಿ ಮತ್ತೆ ಆತಂಕದ ವಾತಾವರಣ ಎದುರಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು