ಬೆಳ್ತಂಗಡಿ: ಭಾರತದ ಕುಶಲ ಕಲೆಗೆ ಶಕ್ತಿಯನ್ನು ತುಂಬಿದವರು ವಿಶ್ವಕರ್ಮ ಸಮುದಾಯದವರು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಶನಿವಾರ ತಾಲೂಕು ಆಡಳಿತ ವತಿಯಿಂದ ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲೆ ಸಂಸ್ಕೃತಿಗೆ ಹೆಸರುವಾಸಿಯಾದ ದೇಶ ಭಾರತದ ಇದಕ್ಕೆ ಮೂಲ ಕೊಡುಗೆ ವಿಶ್ವಕರ್ಮ ಸಮುದಾಯದವರದ್ದು.ತಾಲೂಕಿನ ವಿಶ್ವಕರ್ಮ ಸಮುದಾಯ ಭವನಕ್ಕೆ 55ಲಕ್ಷ ರೂಗಳನ್ನು ನೀಡಿದ್ದು ಮುಂದಿನ ವರ್ಷದಿಂದ ತಾಲೂಕು ಮಟ್ಟದ ವಿಶ್ವಕರ್ಮ ದಿನಾಚರಣೆಯನ್ನು ಲಾಯಿಲದ ವಿಶ್ವಕರ್ಮ ಸಭಾ ಭವನದಲ್ಲಿ ಅಚರಿಸಲಾಗುವುದು ಎಂದರು.
ವಿಶ್ವಕರ್ಮ ಸಂಘದ ಮಾಜಿ ಅದ್ಯಕ್ಷ ಸತೀಶ್ ಅಚಾರ್ಯ ಮಾತನಾಡಿ ವಿಶ್ವಕರ್ಮ ಸಮಾಜಕ್ಜೆ ಇದುವರೆಗೆ ಯಾರೂ ನೀಡದ ಸಹಕಾರವನ್ನು ಶಾಸಕ ಹರೀಶ್ ಪೂಂಜಾ ನೀಡಿದ್ದಾರೆ. ನಮ್ಮ ಸುಮುದಾಯ ಭವನಕ್ಕೆ 55 ಲಕ್ಷ ರೂಗಳನ್ನು ನೀಡುವ ಮೂಲಕ ನಮಗೆ ಶಕ್ತಿ ತುಂಬಿದ್ದಾರೆ. ಅಲ್ಲದೆ ನಮ್ಮ ಸಮುದಾಯದ ಅನೇಕ ಮಂದಿಗೆ ವಿವಿಧ ಕ್ಷೇತ್ರದಲ್ಲಿ ಅವಕಾಶ ನೀಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪತಹಸೀಲ್ದಾರ್ ರವಿ ಕುಮಾರ್ ಮಾತನಾಡಿ ವಿಶ್ವಕರ್ಮ ಸಮುದಾಯ ದೇವ ಶಿಲ್ಪಿಗಳು ಎಂದರು. ಪ್ರಥಮ ದರ್ಜೆ ಸಹಾಯಕಿ ಹೇಮಾ ಸ್ವಾಗತಿಸಿದರು, ಪ್ರಥಮ ದರ್ಜೆ ಸಹಾಯಕ ಮೃತ್ಯುಂಜಯ ನಿರೂಪಿಸಿ ಪ್ರಥಮ ದರ್ಜೆ ಸಹಾಯಕಿ ಅನಿತಾ ವಂದಿಸಿದರು.