News Karnataka Kannada
Saturday, April 27 2024
ಮಂಗಳೂರು

ಮುಲ್ಕಿ: ನಂದಿನಿ ನದಿಯಲ್ಲಿ ಮೀನು ಹಿಡಿಯುವ ಜಾತ್ರೆ

Fishing fair in Nandini river
Photo Credit : News Kannada

ಮುಲ್ಕಿ: ಹಳೆಯಂಗಡಿ ಸಮೀಪದ ಚೇಳಾಯರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಖಂಡಿಗೆ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಜಾತ್ರೆ ಸೋಮವಾರ ಮೇಷ ಸಂಕ್ರಮಣದ ದಿನದಂದು ನಡೆಯಿತು.

ಅಪಾರ ಸಂಖ್ಯೆಯಲ್ಲಿ ಭಕ್ತರು ಮೀನು ಹಿಡಿಯುವ ಜಾತ್ರೆಯಲ್ಲಿ ಪಾಲ್ಗೊಂಡರು.

ಬೆಳಿಗ್ಗೆ 6.30ರ ಸುಮಾರಿಗೆ ದೈವಸ್ಥಾನದ ಅರ್ಚಕ ಆದಿತ್ಯ ಮುಕ್ಕಾಲ್ದಿ ವಾದ್ಯಘೋಷಗಳೊಂದಿಗೆ ನಂದಿನಿ ನದಿಯ ದಡಕ್ಕೆ ಆಗಮಿಸಿ ಪ್ರಸಾದ ಹಾಕುವ ಮೂಲಕ ಮೀನು ಹಿಡಿಯಲು ಚಾಲನೆ ನೀಡಿದರು. ದಡದಲ್ಲಿ ಕಾದು ಕುಳಿತಿದ್ದ ನದಿಗೆ ಪ್ರಸಾದ ಹಾಕಿ, ಸುಡುಮದ್ದು ಸಿಡಿದ ತಕ್ಷಣ ನದಿಗೆ ಧುಮುಕಿ ಮೀನು ಹಿಡಿಯುವುದರಲ್ಲಿ ತಲ್ಲೀನರಾದರು.

ಕೆಲವರು ಇಲ್ಲಿ ಹಿಡಿದ ಮೀನನ್ನು ಇಲ್ಲೇ ಮಾರುತ್ತಾರೆ. ಇಲ್ಲಿನ ಮೀನು ಖರೀದಿಸಲು ತಂಡೋಪತಂಡವಾಗಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ವರ್ಷದಲ್ಲಿ ಒಂದು ದಿನ ಇಲ್ಲಿನ ಮೀನನ್ನು ಪದಾರ್ಥ ಮಾಡಿ ತಿನ್ನುವುದೇ ಇಲ್ಲಿನ ದೈವದ ಪ್ರಸಾದವೆಂದು ಇಲ್ಲಿನ ಭಕ್ತರು ನಂಬುವುದರಿಂದ ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ದೊರೆತಿದೆ.

ಮೀನಿನ ದರವೂ ವಿಪರೀತ ಮಟ್ಟಕ್ಕೆ ಏರುತ್ತದೆ. 150 ರೂಪಾಯಿಯಿಂದ 1 ಸಾವಿರದ ವರೆಗೂ ಮೀನು ಬಿಕರಿಯಾಗುತ್ತದೆ. ಈ ಬಾರಿ ಬಿರು ಬಿಸಿಲಿನ ಪರಿಣಾಮ ನೀರಿನ ಪ್ರಮಾಣ ಕಡಿಮೆಯಾಗಿದ್ದು ಹೇರಳ ಮೀನು ದೊರೆತಿದೆ. ಇರ್ಫೆ, ಕಾನೆ, ಮಾಲಾ ಸಹಿತ ವಿವಿಧ ಬಗೆಯ ಮೀನುಗಳು ಬಲೆಗೆ ಸಿಕ್ಕಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಿಂದ ಮೀನು ಹಿಡಿಯಲು ಬಂದವರು ಫುಲ್ ಖುಷಿಯಾಗಿದ್ದಾರೆ

ಮಂಗಳವಾರ ಬೆಳಿಗ್ಗೆ 5ಕ್ಕೆ ಧರ್ಮರಸು ಉಳ್ಳಾಯ ಹಾಗೂ ಪರಿವಾರ ದೈವಗಳಿಗೆ ನೇಮ, ನಂದಿಗೋಣ ಕುಮಾರ ಸಿರಿಗಳ ಭೇಟಿ, ನಾಗದೇವರಿಗೆ ಭಕ್ತಾದಿಗಳಿಂದ ತಂಬಿಲ, ಸಂಜೆ 4ಕ್ಕೆ ಚೆಂಡು, 6ಕ್ಕೆ ಪರಿವಾರ ದೈವಗಳಿಗೆ ಜೋಡಿ ನೇಮೋತ್ಸವ ನಡೆಯಲಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು