News Karnataka Kannada
Thursday, May 02 2024
ಮಂಗಳೂರು

ಎಂಆರ್‌ ಪಿಎಲ್‌ ನಿಂದ ಕುಶಲಕರ್ಮಿಗಳಿಗೆ ಯಂತ್ರೋಪಕರಣ ನೆರವು

MRPL to provide machinery assistance to artisans
Photo Credit : News Kannada

ಮಂಗಳೂರು: ಎಂಆರ್‌ ಪಿಎಲ್‌ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕುಶಲಕರ್ಮಿಗಳನ್ನು ಬೆಂಬಲಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು. 35 ಕುಶಲಕರ್ಮಿ ಸಮುದಾಯದ ಸದಸ್ಯರಿಗೆ ಉತ್ಪಾದಕತೆ, ಆದಾಯವನ್ನು ಹೆಚ್ಚಿಸುವ ಸಲುವಾಗಿ ಆಧುನಿಕ ಉಪಕರಣಗಳನ್ನು ಹಸ್ತಾಂತರಿಸಲಾಯಿತು.

ಎಂಆರ್‌ಪಿಎಲ್‌ನ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯು ಪುತ್ತೂರಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಡಾ ರುಡಾಲ್ಫ್ ನೊರೊನ್ಹಾ (ಜನರಲ್ ಮ್ಯಾನೇಜರ್) ಮತ್ತು ಮನೀಶ್ ಗುಪ್ತಾ (ಹಿರಿಯ ವ್ಯವಸ್ಥಾಪಕರು MRPL) ಪಾಲ್ಗೊಂಡಿದ್ದರು.

ಶಶಿಕುಮಾರ್ ರೈ ಬಲಿಯೊಟ್ಟು,( ನಿರ್ದೇಶಕ ಎಸ್‌ಸಿಡಿಸಿಸಿ ಬ್ಯಾಂಕ್), ಎಸ್ ಜನಾರ್ದನ ಮೂಲ್ಯ (ಮುಖ್ಯ ಕಾರ್ಯನಿರ್ವಾಹಕ ಕುಂಬಾರರ ಕಾಟೇಜ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ನಿರ್ದೇಶಕ), ಕುಂಬಾರರ ಸಹಕಾರಿ ಉದ್ಯಮದ ಉಪಾಧ್ಯಕ್ಷರಾದ ದಾಮೋಧರ ವಿ. ಪಾಲ್ಗೊಂಡಿದ್ದರು.

ಡಾ ನೊರೊನ್ಹಾ ಅವರು ಈ ಸಂದರ್ಭದಲ್ಲಿ ಮಾತನಾಡಿ ಎಂಆರ್‌ ಪಿಎಲ್‌ CSR ಮತ್ತು CER ಚಟುವಟಿಕೆಗಳ ಮೂಲಕ ಸಮಾಜದ ಅಗತ್ಯವಿರುವ ವರ್ಗಗಳ ಜೀವನ ಸುಧಾರಣೆಗೆ ಕ್ರಮ ಕೈಗೊಂಡಿದೆ. ಎಂಆರ್ಪಿಎಲ್‌ ಪ್ರಾಯೋಜಿತ ಆಧುನಿಕ ಉಪಕರಣಗಳು ಮತ್ತು ಟ್ಯಾಕಲ್‌ಗಳು ಕುಂಬಾರ ಸಮುದಾಯಕ್ಕೆ ಆದಾಯವನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ ಎಂದರು.

ಈ ಸಂದರ್ಭದಲ್ಲಿ 10 ಕುಂಬಾರರು ಎಲೆಕ್ಟ್ರಿಕ್ ಮಡಿಕೆ ಮಾಡುವ ಯಂತ್ರಗಳನ್ನು ಪಡೆದರು ಮತ್ತು 25 ಮಂದಿಗೆ ವಿನ್ಯಾಸ ಕಿಟ್‌ಗಳನ್ನು ಒದಗಿಸಲಾಯಿತು. ಎಲ್ಲ ಫಲಾನುಭವಿಗಳು ಎಂಆರ್‌ಪಿಎಲ್‌ನಿಂದ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು