ಮಂಗಳೂರು: ಬಜ್ಪೆ ಗ್ರಾಮ ಪಂಚಾಯತ್ ನಲ್ಲಿ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ಎಂಆರ್ ಪಿಎಲ್ (MRPL) ವತಿಯಿಂದ ಅಡುಗೆ ತ್ಯಾಜ್ಯ ನಿರ್ವಹಣೆ ಮತ್ತು ಪೈಪ್ ಕಾಂಪೋಸ್ಟಿಂಗ್ ಕಾರ್ಯಕ್ರಮವನ್ನು ಜುಲೈ 5ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬಜ್ಪೆ ಪಟ್ಟಣ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಪೂರ್ಣಕಲಾ ಉದ್ಘಾಟಿಸಿದರು. ಬಜ್ಪೆ ರೋಟರಿ ಕ್ಲಬ್ ಅಧ್ಯಕ್ಷರಾದ ಶೇಖರ್ ಶೆಟ್ಟಿ ಮತ್ತು ಎಂಆರ್ ಪಿಎಲ್ ಅಧಿಕಾರಿಗಳಾದ ಕೆ ನಾಗರಾಜ ರಾವ್ ಮತ್ತು ಸ್ಟೀವನ್ ಪಿಂಟೋ ಉಪಸ್ಥಿತರಿದ್ದರು.
ಮಂಗಳೂರಿನ ರಾಮಕೃಷ್ಣಮಠದ ರಂಜನ್ ಬೆಳ್ಳರ್ಪಾಡಿ ಅವರು ಪಾಟ್ ಕಾಂಪೋಸ್ಟ್ ವಿಧಾನವನ್ನು ಪ್ರಸ್ತುತಪಡಿಸಿದರು ಮತ್ತು ಅಡುಗೆಮನೆ ತ್ಯಾಜ್ಯ ನಿರ್ವಹಣೆಯ ವಿಧಾನಗಳನ್ನು ವಿವರಿಸಿದರು.
ಪೈಪ್ ಕಾಂಪೋಸ್ಟಿಂಗ್ ವಿಧಾನ ಕುರಿತು ವಿವರಿಸಿದರು. ಕಿಚನ್ ವೇಸ್ಟ್ ಅನ್ನು ಸಸ್ಯಗಳಿಗೆ ಹೇಗೆ ಗೊಬ್ಬರವಾಗಿ ಬಳಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಧಾರಾಕಾರ ಮಳೆಯ ನಡುವೆಯೂ 48 ಮಂದಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದರು. ಎಂಆರ್ಪಿಎಲ್ನ ಸ್ವಚ್ಛತಾ ಆಂದೋಲನ ಅಂಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.