ಮಂಗಳೂರು: ರಾಜ್ಯ ಕಾಂಗ್ರೆಸ್ ಆಡಳಿತ ವಿರೋಧಿ ನೀತಿಯನ್ನು ವಿರೋಧಿಸಿ ಮಂಗಳೂರಿನಲ್ಲಿ ಬಿಜೆಪಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಿದೆ.
ಮಾನವ ಸರಪಣಿ ಪ್ರತಿಭಟನೆ ಉದ್ದಕ್ಕೂ “ಡೇಂಜರ್… ಕಾಂಗ್ರೆಸ್ ಡೇಂಜರ್…!, ಪಿಕ್ ಪಾಕೆಟ್.. ಕಾಂಗ್ರೆಸ್ ಪಿಕ್ ಪಾಕೆಟ್….!” ಎಂಬ ಘೋಷಣೆ ತಾರಕ ಸ್ವರದಲ್ಲಿ ಕೇಳಿ ಬಂದಿತ್ತು. ನಗರದ ಹಂಪನಕಟ್ಟೆಯ ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಯಿಂದ ಕ್ಲಾಕ್ ಟವರ್ ವರೆಗೆ ಮಾನವ ಸರಪಳಿ ರಚನೆ ಮಾಡಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಜವಾಬ್ದಾರಿ ವಹಿಸಿರುವ ಶಾಸಕ ವೇದವ್ಯಾಸ ಕಾಮತ್ ಅವರು ಪ್ರತಿಭಟನೆ ಉದ್ದಕ್ಕೂ ಕಾಂಗ್ರೆಸ್ ಡೇಂಜರ್, ಕಾಂಗ್ರೆಸ್ ಪಿಕ್ ಪಾಕೆಟ್ ಎಂಬ ಘೋಷಣೆ ಕೂಗಿದ್ದರು. ಈ ವೇಳೆ ದ.ಕ.ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಬಿಜೆಪಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಈ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದಾರೆ.