ಬೆಳ್ತಂಗಡಿ: ಕರ್ನಾಟಕ ಸರಕಾರ, ಟಾಟಾ ಟೆಕ್ನಾಲಜೀಸ್ ಹಾಗೂ ಪಾಲುದಾರ ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯದ 150 ಸರಕಾರಿ ತರಬೇತಿ ಕೇಂದ್ರಗಳನ್ನು ತಾಂತ್ರಿಕ ಕೇಂದ್ರಗಳಾಗಿ ಪರಿವರ್ತಿಸಿದ್ದು ಇದರ ಅಂಗವಾಗಿ ಬೆಳ್ತಂಗಡಿಯ ಮಾಲಾಡಿ ಐಟಿಐ ಕೇಂದ್ರದ ಲೋಕಾರ್ಪಣೆಯನ್ನು ಶಾಸಕ ಹರೀಶ್ ಪೂಂಜ ಸೋಮವಾರ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರ ಉಜ್ವಲ ಭವಿಷ್ಯ ನಿರುದ್ಯೋಗ ನಿವಾರಣೆಗೆ ರೂಪಿಸಿರುವ ಈ ಯೋಜನೆಯಲ್ಲಿ ಉದ್ಯೋಗಿಗಳಾಗುವ ಬದಲು ಉದ್ಯೋಗ ಸೃಷ್ಟಿಸಿ ಇತರರಿಗೆ ಉದ್ಯೋಗ ನೀಡಬಹುದು,ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಪೂರ್ಣ ನೆರವು ನೀಡಲಾಗುವುದು ಎಂದರು.
ಮಾಲಾಡಿ ಗ್ರಾಪಂ ಅಧ್ಯಕ್ಷೆ ಬೇಬಿ,ಉಪಾಧ್ಯಕ್ಷ ದಿನೇಶ್ ಕರ್ಕೇರ,ಕಚೇರಿ ಅಧೀಕ್ಷಕಿ ಮೋಹಿನಿ ಉಪಸ್ಥಿತರಿದ್ದರು. ತರಬೇತಿ ಅಧಿಕಾರಿ ರಾಧಾಕೃಷ್ಣ ಸ್ವಾಗತಿಸಿದರು.ಪುರಂದರ ವಂದಿಸಿದರು.