ಮಂಗಳೂರು: ಹೈದ್ರಾಬಾದ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಕರ್ನಾಟಕದ ಮುಸ್ಲಿಂ ಸ್ಪೀಕರ್ ಗೆ ಬಿಜೆಪಿ ಶಾಸಕರು ನಮಸ್ಕಾರ ಮಾಡುತ್ತಾರೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಜಮೀರ್ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆ. ಸ್ಪೀಕರ್ ಸ್ಥಾನ ಜಾತಿ ಧರ್ಮ ಹೊರತಾಗಿ ಇರುವ ಹುದ್ದೆಯಾಗಿದೆ. ಜಮೀರ್ ಸ್ಪೀಕರ್ ಸ್ಥಾನವನ್ನು ಮತೀಯ ದೃಷ್ಟಿಯಿಂದ ನೋಡಿದ್ದಾರೆ. ಸ್ಥಾನದ ಗೌರವ ಕಡಿಮೆಯಾಗುವಂತೆ ಮಾತನಾಡಿದ್ದಾರೆ. ಸ್ಪೀಕರ್ ಅವರು ಜಮೀರ್ ರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಹೇಳಿಕೆಯು ಜಮೀರ್ ಮಾನಸಿಕತೆ ತೋರಿಸುತ್ತದೆ. ಮತಿಭ್ರಾಂತಿಯಿಂದ ಜಮೀರ್ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.