News Karnataka Kannada
Sunday, April 28 2024
ಮಂಗಳೂರು

ಮಾಣೂರು: ಇರ್ಷಾದಿಯಾ ಫ್ರೆಂಡ್ಸ್ ಅಸ್ತಿತ್ವಕ್ಕೆ, ಅಧ್ಯಕ್ಷರಾಗಿ ಬಶೀರ್ ಆಯ್ಕೆ

Manur: Irshadia Friends to come into existence, Basheer elected president
Photo Credit : By Author

ಬಂಟ್ವಾಳ: ತುಂಬೆ ಗ್ರಾಮದ ಮಾಣೂರು ಎಂಬಲ್ಲಿ ನ. 1 ರಂದು ಇರ್ಷಾದುಲ್ ಇಸ್ಲಾಂ ಮದರಸ ಮಾಣೂರು ವಠಾರದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶಕ್ಕಾಗಿ ಇರ್ಷಾದಿಯಾ ಫ್ರೆಂಡ್ಸ್ ಸಂಸ್ಥೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗೌರವ ಸಲಹೆಗಾರ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಮಾತನಾಡಿ ಸಂಘಟನೆಗಳನ್ನು ತೆರೆಯುವುದು ಮುಖ್ಯವಲ್ಲ ಅದನ್ನು ಉತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುವುದು ಮುಖ್ಯವಾಗಿದೆ, ಸಂಸ್ಥೆಯ ಒಂದು ಪೈಸೆಯಾದರೂ ವೈಯಕ್ತಿಕ ಉದ್ದೇಶಕ್ಕೆ ಉಪಯೋಗವಾಗವಾಗದಿರಲಿ ಎಂದು ಸಂದೇಶ ನೀಡಿ ಪ್ರಾರ್ಥನೆ ನೆರವೇರಿಸಿ ಚಾಲನೆ ನೀಡಿದರು.

ಇರ್ಷಾದಿಯಾ ಫ್ರೆಂಡ್ಸ್ ಮಾಣೂರು ಗೌರವಾಧ್ಯಕ್ಷರಾಗಿ ಎಂ.ಎಚ್.ಹಸನಬ್ಬ ಗೌರವ ಸಲಹೆಗಾರರಾಗಿ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಹಮೀದ್ ಮುಸ್ಲಿಯಾರ್ ಮತ್ತು ಹಮೀದ್ ವಾಟರ್ ಸಪ್ಲೈ, ಅಧ್ಯಕ್ಷರಾಗಿ ಬಶೀರ್ ಉಮನಗುಡ್ಡೆ, ಉಪಾಧ್ಯಕ್ಷರಾಗಿ ಶಹರೋಝ್, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ, ಕಾರ್ಯದರ್ಶಿಯಾಗಿ ಅಕ್ಬರ್ ಅಲಿ, ಕೋಶಾಧಿಕಾರಿಯಾಗಿ ಸದ್ದಾಂ ಮಾಣೂರು ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಮಾಣೂರು, ಸಂಶೀರ್ ಮಾಣೂರು, ಉಮರಬ್ಬ, ಮಜೀದ್, ಶಬೀರ್ ಮಾಣೂರು, ಇಸ್ಮಾಯಿಲ್ ಮಾಣೂರು, ಬದ್ರುದ್ದೀನ್ ಮಾಣೂರು, ಅಝ್ಮಾಲ್, ಫಯಾಝ್, ಮುಹಾಝ್, ಬಿಲಾಲ್, ಸಾಹಿಲ್, ಬದ್ರುದ್ದೀನ್ ಡಿ. ಅವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಶೀರ್ ಉಮನಗುಡ್ಡೆ ಅವರನ್ನು ಶಾಲುಹೊದಿಸಿ ಸನ್ಮಾನಿಸಲಾಯಿತು. ಅಕ್ಬರ್ ಮಾಣೂರು ಸ್ವಾಗತಿಸಿ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು