ಮಂಗಳೂರು: ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆಯಲಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟು ಪ್ರಚಾರ ಆರಂಭಿದಿದ್ದೇವೆ ಎಂದರು. ಶೇ 4o ಕಮಿಷನ್, ಭ್ರಷ್ಟಾಚಾರ ಆರೋಪ ಕಾಂಗ್ರೆಸ್ ಮಾಡ್ತಾ ಇದೆ. ಯಾಕಂದ್ರೆ ಅವರ ಮೇಲೆ ಭ್ರಷ್ಟಾಚಾರದ ಕೇಸ್ ಗಳಿವೆ ಅವುಗಳನ್ನು ಮರೆಮಾಚಲು ಈ ಷಡ್ಯಂತ್ರ ಮಾಡುತ್ತಿದ್ದಾರೆ ಎಂದರು.
ಡಿಕೆಶಿ ಮನೆಯಲ್ಲಿ, ದೆಹಲಿಯ ಬಂಗಲೆಯಲ್ಲಿ ಸಿಕ್ಕ ಹಣ ಎಷ್ಟು ಅಂತ ಜನ ನೋಡಿದ್ದಾರೆ. ಡಿಕೆಶಿ ತಿಹಾರ್ ಜೈಲಿಗೆ ಹೋಗಿ ಈಗ ಜಾಮೀನಿನಲ್ಲಿ ಇದ್ದಾರೆ. ಮತ್ತೆ ಯಾವಾಗ ಜೈಲಿಗೆ ಹೋಗ್ತಾರೆ ಗೊತ್ತಿಲ್ಲ ಎಂದು ಹೇಳಿದರು.
ಅಝನ್ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ
ಈ ಹೇಳಿಕೆ ಚುನಾವಣೆಯಲ್ಲಿ ಏನು ಪರಿಣಾಮ ಬೀರೊತ್ತೆ ಅಂತ ನಾವು ಸಿದ್ದಾಂತ ಬಿಡಲಾರೆವು. ನಮಗೆ ಎಲ್ಲಾ ಮುಸಲ್ಮಾನರ ಓಟ್ ಬೇಡ ಅಂತ ಹೇಳಿಲ್ಲ. ಪಿಎಫ್ಐ ಬೆಂಬಲಿತ ಮುಸಲ್ಮಾನರ ಓಟ್ ಬೇಡ ಅಂತ ಹೇಳಿದ್ದೆ. ಅಜಾನ್ ನಿಂದ ಮಕ್ಕಳ ಪರೀಕ್ಷೆ ಮೇಲೆ ಎಫೆಕ್ಟ್ ಆಗುತ್ತದೆ. ಇದು ಜನರ ಅಭಿಪ್ರಾಯ ಕೂಡ ಆದರೆ ಅದನ್ನ ನಾನು ಹೇಳಿದ್ದೇನೆ ಎಂದರು.
ಅಲ್ಲಾನಿಗೆ ಕಿವಿ ಇದೆ ಇಲ್ಲವಾ ಅಂತ ನಾನು ಕೇಳಿದ್ದು ಹೌದು. ಆದರೆ, ಮೈಕ್ ನಲ್ಲಿ ಕೂಗೊ ಮೂಲಕ ಮುಸ್ಲಿಮರೇ ಅಲ್ಲಾನನ್ನು ಅವಮಾನಿಸುತ್ತಿದ್ದಾರೆ. ನಾನು ಧಾರ್ಮಿಕ ನಿಂದನೆ ಖಂಡಿತಾ ಮಾಡಿಲ್ಲ. ಆದ್ರೆ ಮೈಕ್ ನಲ್ಲಿ ಅಜಾನ್ ಕರೆಯುವ ವಿಚಾರ ಮಾತನಾಡಿದ್ದೆ. ಅದು ಧಾರ್ಮಿಕ ನಿಂದನೆ ಮಾಡಿದಂತೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.