News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಶಾರದೋತ್ಸವ ಮತ್ತು ಹುಲಿವೇಷದ ಬ್ಯಾನರ್‌ಗಳಿಗೆ ಹಾನಿ, ಮೂವರ ಬಂಧನ

Three arrested for damaging banners of 'Sharadotsava' and 'tiger costume'
Photo Credit : News Kannada

ಮಂಗಳೂರು: ಇತ್ತೀಚೆಗೆ ಹಾಕಲಾಗಿದ್ದ ಶಾರದೋತ್ಸವ ಮತ್ತು ಫ್ರೆಂಡ್ಸ್‌ ಹುಲಿಯ ಪ್ರಚಾರಾರ್ಥದ ಸಲುವಾಗಿ ಹಾಕಲಾಗಿದ್ದ ಬ್ಯಾನರ್‌ಗಳಿಗೆ ಹಾನಿಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಾಮಂಜೂರು ನಿವಾಸಿಗಳಾದ ಸುಮಿತ್‌ ಹೆಗ್ಡೆ (25), ಪ್ರವೀಣ್‌ ಪೂಜಾರಿ (24), ಯತೀಶ್‌ ಪೂಜಾರಿ (24) ಎಂಬ ಮೂವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ವಾಮಂಜೂರಿನಲ್ಲಿ ಇತ್ತೀಚೆಗೆ ಶಾರದೋತ್ಸವ ಮತ್ತು ಫ್ರೆಂಡ್ಸ್‌ ಹುಲಿಯ ಪ್ರಚಾರಾರ್ಥದ ಸಲುವಾಗಿ ಹಾಕಲಾಗಿದ್ದ ಬ್ಯಾನರ್‌ಗಳಿಗೆ ಹಾನಿಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ವಾಮಂಜೂರು ನಿವಾಸಿಗಳಾದ ಸುಮಿತ್‌ ಹೆಗ್ಡೆ (25), ಪ್ರವೀಣ್‌ ಪೂಜಾರಿ (24), ಯತೀಶ್‌ ಪೂಜಾರಿ (24) ಎಂದು ಗುರುತಿಸಲಾಗಿದೆ. ನಗರದ ಹೊರವಲಯದ ವಾಮಂಜೂರಿನಲ್ಲಿ ವಾಮಂಜೂರು ಫ್ರೆಂಡ್ಸ್‌ ಹುಲಿ ವೇಷ ತಂಡದವರು ದಸರಾ ಸಂದರ್ಭ ಹುಲಿ ವೇಷ ಹಾಕಿದರೆ, ವಾಮಂಜೂರು ಟೈಗರ್ಸ್‌ ತಂಡದವರು ಗಣೇಶೋತ್ಸವಕ್ಕೆ ಹುಲಿ ವೇಷ ಹಾಕುತ್ತಿದ್ದರು. ಬಂಧಿತ ಆರೋಪಿಗಳು ವಾಮಂಜೂರು ಟೈಗರ್ಸ್‌ ತಂಡದ ಸದಸ್ಯರು. ಈ ತಂಡಗಳ ಮಧ್ಯೆ ಇರುವ ಅಸಮಾಧಾನದಿಂದ ಮೂವರು ಆರೋಪಿಗಳು ಅ.8 ರಂದು ವಾಮಂಜೂರು ಸುತ್ತಮುತ್ತ ಹಾಕಿದ ಶಾರದೋತ್ಸವ ಮತ್ತು ಹುಲಿ ವೇಷದ ಬ್ಯಾನರ್‌ಗೆ ಹಾನಿ ಮಾಡಿದ್ದಾರೆ. ಈ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಸಾಮಾಜಿಕ ಶಾಂತಿ ಕದಡುವ ಹುನ್ನಾರವೂ ಆರೋಪಿಗಳದ್ದಾಗಿತ್ತು ಎಂದು ತಿಳಿದು ಬಂದಿದೆ.

ಮೂವರು ಆರೋಪಿಗಳ ದುಷ್ಕೃತ್ಯ ವಾಮಂಜೂರಿನಲ್ಲಿ ಹಾಕಲಾದ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದೇ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಬೇಧಿಸಿದ ಪೊಲೀಸ್‌ ತನಿಖೆ ಬಗ್ಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು