ಮಂಗಳೂರು: ಅಕ್ಟೋಬರ್ 18 ರಂದು ನಡೆಯಲಿರುವ ಶಾಂತಿಯುತ ಪ್ರತಿಭಟನೆಗೆ ತಡ ರಾತ್ರಿ ಮುಖಂಡರ ಮನೆಗಳಿಗೆ ಪ್ರತಿಭಟನೆ ತಡೆಯಲು ನೋಟಿಸ್ ಜಾರಿ ಮಾಡಿ ಬೆದರಿಸುವುದು ಖಂಡನೀಯ.
ಇದು ಯಾವುದೇ ದೇಶ ವಿರೋಧಿ ಕ್ರತ್ಯವಲ್ಲ. ಕಳೆದ 6 ವರುಷಗಳಿಂದ ಜನರನ್ನು ಮೋಸ ಮಾಡಿ ಸರ್ಕಾರ ಹಣ ವಸೂಲಿ ಮಾಡುವ ಬಗ್ಗೆ ಹಲವು ಮನವಿ ಹಾಗೂ ಹೋರಾಟ ಮಾಡಿ ಸ್ಪಂದಿಸದ ಬಗ್ಗೆ ಜನಸಾಮಾನ್ಯರ ತ್ರೀವ ಮನ ನೋವಿನ ಸಂಘಟಿತ ಹೋರಾಟ.
ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಜನಪರ ಕಾಳಜಿ ಇದ್ದಲ್ಲಿ ಇಂದೇ ಟೋಲ್ ಗೇಟ್ ರದ್ದು ಮಾಡಿ ನಾವು ಜನ ಸಾಮಾನ್ಯರ ಓಟ್ಟಿಗೆ ಇದ್ದೆವೇ ಎಂದು ತೋರಿಸಲಿ.ಇದರಿಂದ ಯಾವುದೇ ಸಂಘಟನೆ ಅಥವಾ ಪಕ್ಷಗಳು ಇದರ ಲಾಭ ಅಪೇಕ್ಷಿಸುವುದಿಲ್ಲ. ಎಂದು ಜೆಡಿಎಸ್ ದ.ಕ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ತಿಳಿಸಿದ್ದಾರೆ.